ನವದೆಹಲಿ: ಮುಂದಿನ ಐದು ವರ್ಷದಲ್ಲಿ ದೇಶದ ಮೊದಲ ವಾಟರ್ ಗ್ರಿಡ್ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ರೂ.3,50,000 ಕೋಟಿ ವೆಚ್ಚದಲ್ಲಿ ವಾಟರ್ ಗ್ರಿಡ್ ಸ್ಥಾಪನೆ ಮಾಡಲಾಗುತ್ತದೆ ಎಂದಿದ್ದಾರೆ.
“ಈ ಯೋಜನೆಯಿಂದಾಗಿ ಮರಾಠವಾಡ ಪ್ರದೇಶಕ್ಕೆ ದೊಡ್ಡಮಟ್ಟದಲ್ಲಿ ಪ್ರಯೋಜನವಾಗಲಿದೆ. ಜನರ ನೀರಿನ ಲಭ್ಯತೆಯನ್ನು ಇದು ಹೆಚ್ಚು ಮಾಡಲಿದೆ. ದೂರದವರೆಗೆ ಹೋಗಿ ನೀರನ್ನು ತರುವ ಸಂಕಟದಿಂದ ಮಹಿಳೆಯರನ್ನು ಪಾರು ಮಾಡಲಿದೆ” ಎಂದು ಮೋದಿ ಹೇಳಿದ್ದಾರೆ.
ಜಲ ಜೀವನ್ ಮಿಷನ್ ನೀರಿನ ಸಂರಕ್ಷಣೆ ಮತ್ತು ಪ್ರತಿ ಜನರ ಮನೆಬಾಗಿಲಿಗೆ ಶುದ್ಧಕುಡಿಯುವ ನೀರನ್ನು ತಲುಪಿಸುವ ಮಹತ್ವಾಕಾಂಕ್ಷೆ ಯನ್ನು ಹೊಂದಿದೆ ಎಂದಿದ್ದಾರೆ.
ಶೌಚಾಲಯ ಮತ್ತು ನೀರು ವಿಶ್ವದ ಅತಿ ದೊಡ್ಡ ಸಮಸ್ಯೆಗಳು ಎಂಬ ರಾಮ್ ಮನೋಹರ್ ಲೋಹಿಯಾ ಅವರ ಮಾತುಗಳನ್ನು ಜ್ಞಾಪಿಸಿಕೊಂಡ ಮೋದಿ, “ಈ ಎರಡು ಸಮಸ್ಯೆಗಳು ಅಂತ್ಯಗೊಂಡರೆ ಮಹಿಳೆಯರು ಈ ದೇಶವನ್ನು ಮುನ್ನಡೆಸುತ್ತಾರೆ” ಎಂದಿದ್ದಾರೆ.
ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ವೇಳೆ ಮಾತನಾಡಿ, ಗೋದಾವರಿ ನದಿಯಿಂದ 168 tmc ನೀರನ್ನು ತಂದು ಅದನ್ನು ವಾಟರ್ ಗ್ರಿಡ್ ಮೂಲಕ ಅಣೆಕಟ್ಟುಗಳಿಗೆ ಸಂಪರ್ಕಿಸಲಾಗುತ್ತದೆ ಮತ್ತು ಅದನ್ನು ಪೈಪ್ಲೈನ್ ಮೂಲಕ ರೈತರಿಗೆ ಹಂಚಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.