ಶಿವಮೊಗ್ಗ: ಫೌಂಟೇನ್ ಪೆನ್ನಿನ ಯುಗದ ನೆನಪುಗಳನ್ನು ಮರಳಿ ತರುವ ಉದ್ದೇಶದಿಂದ, ಶಿವಮೊಗ್ಗ ಜಿಲ್ಲೆಯ ಹಾವಿನಹಳ್ಳಿ ಗ್ರಾಮದ ಆಚಾರಿ ಕೃಷ್ಣಮೂರ್ತಿ ಆಚಾರ್ ಅವರು 19.5 ಅಡಿ ಉದ್ದದ ಮರದ ಪೆನ್ನನ್ನು ಕೆತ್ತಿದ್ದಾರೆ. ಈ ಪೆನ್ ಮಾದರಿಯು 250 ಕೆಜಿ ತೂಗುತ್ತದೆ. ಪ್ರದರ್ಶನಕ್ಕೆ ಇದನ್ನು ಇಡಲಾಗಿದ್ದು ಭಾರೀ ಪ್ರಮಾಣದಲ್ಲಿ ಜನರ ಗಮನವನ್ನು ಸೆಳೆಯುತ್ತಿದೆ.
ಮರದ ಪೆನ್ನಿನ ಬಗ್ಗೆ ವಿವರಿಸಿದ ಕೃಷ್ಣಮೂರ್ತಿ ಅವರು, “ಹದಿನಾಲ್ಕು ವರ್ಷಗಳ ಹಿಂದೆ, ನಾನು ವಿವಿಧ ಗಾತ್ರದ ಮರದ ಪೆನ್ನುಗಳನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಿದೆ. ನಾನು ಯಾವಾಗಲೂ ಫೌಂಟೇನ್ ಶಾಯಿ ಪೆನ್ನುಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೆ, ಈಗ ಆ ಕ್ಲಾಸಿಕ್ ಪೆನ್ನುಗಳು ಕಣ್ಮರೆಯಾಗುತ್ತಿವೆ. ಆ ಯುಗದ ನೆನಪಿಗಾಗಿ, ನಾನು ಈ ಪೆನ್ನು ಅನ್ನು ಮರದಿಂದ ಕೆತ್ತಿದ್ದೇನೆ” ಎಂದಿದ್ದಾರೆ.
ಫೌಂಟೇನ್ ಪೆನ್ನುಗಳು ಬಳಕೆಯಲ್ಲಿಲ್ಲದ ಈ ಸಮಯದಲ್ಲಿ, ಈ ಮರದ ಫೌಂಟೇನ್ ಪೆನ್ನು ಅದರ ಗತಕಾಲದ ವೈಭವವನ್ನು ಮರಳಿ ತಂದಿದೆ.
“ಇತ್ತೀಚಿನ ದಿನಗಳಲ್ಲಿ ಫೌಂಟೇನ್ ಪೆನ್ನುಗಳು ಕಣ್ಮರೆಯಾಗುತ್ತಿವೆ ಆದ್ದರಿಂದ ನಾನು ಮರದಿಂದ ಅದನ್ನು ರಚನೆ ಮಾಡಿದ್ದೇನೆ. ನಾನು ಇದರ ಮಾಹಿತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಂಡಕ್ಕೆ ಕಳುಹಿಸಿದ್ದೇನೆ. ಏನಾಗುತ್ತದೆ ಎಂದು ನೋಡೋಣ” ಎಂದು ಕೃಷ್ಣಮೂರ್ತಿ ಹೇಳುತ್ತಾರೆ.
ಅವರ ಮರದ ಪೆನ್ನು ತಮ್ಮ ಹಳ್ಳಿಗೆ ಒಳ್ಳೆಯ ಹೆಸರನ್ನು ತರುತ್ತದೆ ಎಂದು ಗ್ರಾಮಸ್ಥರು ಭರವಸೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.