ಚಿತ್ತೂರ್: ಆಂಧ್ರಪ್ರದೇಶದ ತುಮ್ಮಲಗುಂಟ ಗ್ರಾಮದಲ್ಲಿ ಸುಮಾರು 2 ಲಕ್ಷ ಬಳೆಗಳಿಂದ ತಯಾರಿಸಲ್ಪಟ್ಟ 30 ಅಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ. ಬಳೆ ಗಣೇಶನ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.
ಬಳೆ ಗಣೇಶನನ್ನು ವಿನ್ಯಾಸಗೊಳಿಸಲು ಮೂವತ್ತು ಕಲಾವಿದರು 15 ದಿನಗಳ ಕಾಲ ಶ್ರಮಿಸಿದ್ದಾರೆ. ಪ್ರತಿಷ್ಠಾಪನೆ ಮುಗಿದ ಬಳಿಕ ಈ ಗಣಪನನ್ನು ನೀರಿನಲ್ಲಿ ವಿಸರ್ಜನೆಗೊಳಿಸಲಾಗುವುದಿಲ್ಲ. ಬದಲಿಗೆ ಬಳೆಗಳನ್ನು ತೆಗೆದು ಮಹಿಳೆಯರಿಗೆ ಹಂಚಿಕೆ ಮಾಡಲಾಗುತ್ತದೆ.
ಪ್ರಸಿದ್ಧ ತೀರ್ಥಕ್ಷೇತ್ರವಾದ ತಿರುಪತಿ ಸಮೀಪವೇ ತುಮ್ಮಲಗುಂಟ ಗ್ರಾಮ ಇದೆ.
ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಗಣೇಶ ಚತುರ್ಥಿ ಉತ್ಸವವು ಸೆಪ್ಟೆಂಬರ್ 12ರವರೆಗೂ ಕೆಲವು ಕಡೆಗಳಲ್ಲಿ ಮುಂದುವರೆಯುತ್ತದೆ. ಒಂದು ದಿನ, ಮೂರು ದಿನ, ಐದು ದಿನ ಹೀಗೆ ಹಲವು ದಿನಗಳ ಕಾಲ ಗಣಪನನ್ನು ಕೂರಿಸಲಾಗುತ್ತದೆ. ಗಣೇಶ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡುವ ಮೂಲಕ ಹಬ್ಬವನ್ನು ಮುಕ್ತಾಯಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.