]ನವದೆಹಲಿ: ಟಾಟಾ ಸ್ಟೀಲ್ ಕಂಪನಿಯು ಝಾರ್ಖಂಡಿನ ನೊಮುಂಡಿಯಲ್ಲಿನ ತನ್ನ ಮೈನಿಂಗ್ನಲ್ಲಿ ಮಹಿಳಾ ಮೈನಿಂಗ್ ಎಂಜಿನಿಯರ್ಗಳನ್ನು ಎಲ್ಲಾ ಪಾಳಿಯಲ್ಲೂ ನಿಯೋಜನೆಗೊಳಿಸಿದೆ. ಈ ಬಗ್ಗೆ ಕಂಪನಿಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಈ ಮೂಲಕ ಗಣಿಗಾರಿಕೆಯಲ್ಲಿ ಎಲ್ಲಾ ಪಾಳಿಯಲ್ಲಿ ಮಹಿಳೆಯರನ್ನು ನಿಯೋಜಿಸಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
ಗಣಿಗಾರಿಕೆ, ವಿದ್ಯುತ್, ಯಾಂತ್ರಿಕ ಮತ್ತು ಖನಿಜ ಸಂಸ್ಕರಣೆ ಸೇರಿದಂತೆ ಎಲ್ಲಾ ವಿಭಾಗಗಳ 10 ಮಹಿಳಾ ಅಧಿಕಾರಿಗಳನ್ನು ಕಂಪನಿ ನೇಮಕ ಮಾಡಿದೆ.
ಮೈನಿಂಗ್ಗಳಲ್ಲಿ ಎಲ್ಲಾ ಪಾಳಿಯಲ್ಲಿ ಮಹಿಳೆಯರನ್ನು ನಿಯೋಜಿಸಿದ ಭಾರತದ ಮೊದಲ ಕಂಪನಿ ಟಾಟಾ ಸ್ಟೀಲ್ ಆಗಿದೆ ಮತ್ತು 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಎಲ್ಲಾ ಪಾಳಿಯಲ್ಲಿ ಮಹಿಳೆಯರನ್ನು ನಿಯೋಜಿಸಿದ ಟಾಟಾ ಸ್ಟೀಲ್ನಲ್ಲಿ ಒಎಂಕ್ಯೂ (ಅದಿರು, ಗಣಿ ಮತ್ತು ಕ್ವಾರೆಗಳು) ವಿಭಾಗವು ಮೊದಲ ವಿಭಾಗವಾಗಿದೆ ”ಎಂದು ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು, ಟಾಟಾ ಸ್ಟೀಲ್ ಜೇಮ್ಶೆಡ್ಪುರ ಘಟಕದ ಶಾಪ್ ಫ್ಲೋರಿನಲ್ಲಿ ಏಪ್ರಿಲ್ 1ರಿಂದ ಎರಡು ಪಾಳಿಯಲ್ಲಿ ಮಹಿಳೆಯರಿಗೆ ಕೆಲಸವನ್ನು ನೀಡಲಾಗಿತ್ತು. ಅದರ ಕೋಕ್ ಪ್ಲಾಂಟ್ ಮತ್ತು ಎಲೆಕ್ಟ್ರಿಕಲ್ ರಿಪೇರ್ ಶಾಪ್ಫ್ಲೋರ್ಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರ ನಡುವಣ ಎರಡು ಎ ಮತ್ತು ಬಿ ಪಾಳಿಗಳಲ್ಲಿ 52 ಮಹಿಳಾ ಉದ್ಯೋಗಿಗಳನ್ನು ನಿಯೋಜಿಸಲಾಗಿತ್ತು.
“2025 ರ ವೇಳೆಗೆ ಶೇ.20 ರಷ್ಟು ಮಹಿಳಾ ಅಧಿಕಾರಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ಕಂಪನಿಯ ಗುರಿ ಮತ್ತು ಕಾನೂನಿನ ಇತ್ತೀಚಿನ ಮಾರ್ಪಾಡುಗಳಿಗೆ ಅನುಗುಣವಾಗಿ, ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗ ಮತ್ತು ರಾ ಮೆಟಿರಿಯಲ್ಸ್ ವಿಭಾಗವು ‘Women@Mines’ ಎಂಬ ಉಪಕ್ರಮವನ್ನು ಕೈಗೊಂಡಿದೆ. ಈ ಉಪಕ್ರಮವು ಸಂವಹನ, ಸೌಕರ್ಯಗಳು, ಅಧಿಕಾರಿಗಳು ಮತ್ತು ಅಧಿಕಾರಿಗಳಲ್ಲದ ಮಹಿಳೆಯರ ನೇಮಕಾತಿ ಮತ್ತು ತೇಜಸ್ವಿನಿ 2.0 ಎಂಬ ನಾಲ್ಕು ಅಂಶಗಳನ್ನು ಕೇಂದ್ರೀಕರಿಸುತ್ತದೆ. 1952 ರ ಗಣಿ ಕಾಯ್ದೆಯ ಸೆಕ್ಷನ್ 46 ರ ನಿಬಂಧನೆಗಳಿಂದ ಭೂಮಿಯ ಮೇಲಿನ ಯಾವುದೇ ಗಣಿ ಮತ್ತು ನೆಲದ ಕೆಳಗಿರುವ ಯಾವುದೇ ಗಣಿಗಳಲ್ಲಿ ಮಹಿಳಾ ಉದ್ಯೋಗಗಳಿಗೆ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು (ಜನವರಿ 29, 2019 ರ ಗೆಜೆಟ್ ಅಧಿಸೂಚನೆಯನ್ನು ) ಇದು ಅನುಸರಿಸುತ್ತದೆ” ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
“ಮಹಿಳೆಯರನ್ನು ಮೈನಿಂಗ್ಗಳಲ್ಲಿ ನಿಯೋಜಿಸಲು ನಾವು ತುಂಬಾ ಸಂತೋಷಪಡುತ್ತೇವೆ. ವಿಶಾಲವಾದ ಪ್ರತಿಭಾ ಸಾಗರಕ್ಕೆ ಅವಕಾಶ ನೀಡುವ ಮೂಲಕ ವೈವಿಧ್ಯಮಯ ಮತ್ತು ಅಂತರ್ಗತ ಕಾರ್ಯಪಡೆ ರಚಿಸುವಲ್ಲಿನ ವ್ಯಕ್ತಿಗಳ ಅನನ್ಯತೆಯನ್ನು ನಾವು ಗೌರವಿಸುತ್ತೇವೆ. ನಮ್ಮ ಗಣಿಗಳ ಎಲ್ಲಾ ವಿಭಾಗಗಳಲ್ಲಿ ಹೆಚ್ಚಿನ ಮಹಿಳೆಯರನ್ನು ನೇಮಕ ಮಾಡುವ ಸಲುವಾಗಿ ನಾವು ನಮ್ಮ ಸೌಲಭ್ಯಗಳನ್ನು ಹೆಚ್ಚಿಸುತ್ತಿದ್ದೇವೆ. ಎಲ್ಲಾ ಪಾಳಿಗಳಲ್ಲಿ ಮಹಿಳೆಯರಿಗೆ ಕೆಲಸವನ್ನು ನೀಡುವ ನಮ್ಮ ನಿರ್ಧಾರವು ನವೀನ ಆಲೋಚನೆಗಳು ಮತ್ತು ಹೊಸ ಪೀಳಿಗೆಗಯ ದೃಷ್ಟಿಕೋನಗಳ ಬದಲಾವಣೆಗೆ ಕಾರಣವಾಗುತ್ತದೆ ”ಎಂದು ಟಾಟಾ ಸ್ಟೀಲ್ ರಾ ಮೆಟೀರಿಯಲ್ಸ್ನ ಉಪಾಧ್ಯಕ್ಷ ಅರುಣ್ ಮಿಶ್ರಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.