ನವದೆಹಲಿ: ಕೇಂದ್ರ ಸರ್ಕಾರವು ತನ್ನ ಪಾರ್ಶ್ವ ನೇಮಕಾತಿ (ಲ್ಯಾಟರಲ್ ರಿಕ್ರ್ಯೂಟ್ಮೆಂಟ್ ಪಾಲಿಸಿ) ನಿಯಮದಡಿ, ಮೊದಲ ಬಾರಿಗೆ ವಿವಿಧ ಕ್ಷೇತ್ರಗಳ ಒಂಬತ್ತು ಖಾಸಗಿ ವಲಯದ ತಜ್ಞರನ್ನು ವಿವಿಧ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟದ ನೇಮಕಾತಿ ಸಮಿತಿಯು ಇವರುಗಳ ನೇಮಕಾತಿಗಳನ್ನು ಅನುಮೋದಿಸಿದೆ.
ಖಾಸಗಿ ವಲಯದ ತಜ್ಞರ ಪೈಕಿ ಒಂಬತ್ತು ಜಂಟಿ ಕಾರ್ಯದರ್ಶಿಗಳನ್ನು ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
“ಏಳನೇ ಕೇಂದ್ರ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್ನ 14 ನೇ ಹಂತದಲ್ಲಿ” ಇವರುಗಳನ್ನು ವಿವಿಧ ಸಚಿವಾಲಯಗಳಿಗೆ ನಿಯೋಜಿಸಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ, ಅವರು ಅಧಿಕಾರಗಳನ್ನು ವಹಿಸಿಕೊಂಡ ದಿನದಿಂದ ಅವರ ನೇಮಕಾತಿಗಳು ಸಕ್ರಿಯಗೊಳ್ಳಲಿದೆ.
ಕಾಕೋಲಿ ಘೋಷ್ (ಕೃಷಿ ಸಚಿವಾಲಯ), ಅಂಬರ್ ದುಬೆ (ನಾಗರಿಕ ವಿಮಾನಯಾನ), ಅರುಣ್ ಗೋಯೆಲ್ (ವಾಣಿಜ್ಯ), ರಾಜೀವ್ ಸಕ್ಸೇನಾ (ಆರ್ಥಿಕ ವ್ಯವಹಾರಗಳು), ಸುಜಿತ್ ಕುಮಾರ್ ಬಾಜಪೇಯಿ (ಪರಿಸರ, ಅರಣ್ಯ), ಸೌರಭ್ ಮಿಶ್ರಾ (ಹಣಕಾಸು ಸೇವೆಗಳು), ದಿನೇಶ್ ದಯಾನಂದ್ ಜಗದಲೆ (ಹೊಸ ಮತ್ತು ನವೀಕರಿಸಬಹುದಾದ ಇಂಧನ), ಸುಮನ್ ಪ್ರಸಾದ್ ಸಿಂಗ್ (ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು) ಮತ್ತು ಭೂಷಣ್ ಕುಮಾರ್ (ಶಿಪ್ಪಿಂಗ್) ನೂತನ ಜಂಟಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ. ಇವರೆಲ್ಲರೂ ಖಾಸಗಿ ಕ್ಷೇತ್ರದಿಂದ ಬಂದ ತಜ್ಞರಾಗಿದ್ದಾರೆ.
ಜಂಟಿ ಕಾರ್ಯದರ್ಶಿಗಳ ಹುದ್ದೆಗಳನ್ನು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ಅರಣ್ಯ ಸೇವೆ (ಐಎಫ್ಒಎಸ್) ಮತ್ತು ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಗಳು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಕೈಗೊಂಡ ಪ್ರಕ್ರಿಯೆಯ ಮೂರು ಹಂತದ ಕಠಿಣ ಆಯ್ಕೆಯ ಮೂಲಕ ಆಯ್ಕೆ ಮಾಡುತ್ತಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಜಂಟಿ ಕಾರ್ಯದರ್ಶಿ-ಶ್ರೇಣಿಯ ಅಧಿಕಾರಿಗಳ ಹುದ್ದೆಗಳಿಗೆ “ಲ್ಯಾಟರಲ್ ಎಂಟ್ರಿ” ಮೋಡ್ ಮೂಲಕ ಕಳೆದ ವರ್ಷ ಜೂನ್ನಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು.
ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ವಲಯದ ತಜ್ಞರ ನೇಮಕಕ್ಕೆ ಸಂಬಂಧಿಸಿದ ಲ್ಯಾಟರಲ್ ಎಂಟ್ರಿ ಮೋಡ್ ಅನ್ನು ಅಧಿಕಾರವರ್ಗದಲ್ಲಿ ಹೊಸ ಪ್ರತಿಭೆಗಳನ್ನು ತರಲು ಮೋದಿ ಸರ್ಕಾರ ಕೈಗೊಂಡ ಮಹತ್ವಾಕಾಂಕ್ಷೆಯ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.