ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ರಾಮ್ನಗರ ತಹಸಿಲ್ನ ಇಂಚಾ ಗ್ರಾಮದ ಬುಕ್ ಬೈಂಡರ್ ಸುರೇಶ್ ಸಿಂಗ್ ಅವರು ಕಾಶ್ಮೀರ ಆಡಳಿತಾತ್ಮಕ ಸೇವಾ (ಕೆಎಎಸ್) ಪರೀಕ್ಷೆಯಲ್ಲಿ 10 ನೇ ರ್ಯಾಂಕ್ ಗಳಿಸುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ಪ್ರತಿಷ್ಠಿತ ಪರೀಕ್ಷೆಯನ್ನು ರ್ಯಾಂಕ್ ಮೂಲಕ ಪಾಸ್ ಮಾಡಿರುವ ಸುರೇಶ್ ಅವರಿಗೆಗೆ ಸುಲಭದ ಮಾತಾಗಿರಲಿಲ್ಲ. ಆಟೋರಿಕ್ಷಾ ಚಾಲಕನ ಮಗನಾಗಿರುವ ಅವರು ತಮ್ಮ ಕನಸನ್ನು ನನಸು ಮಾಡುವುದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ.
“ಪರೀಕ್ಷಾ ಸಿದ್ಧತೆ ಒಂದು ಸುದೀರ್ಘ ಪ್ರಕ್ರಿಯೆಯಾಗಿತ್ತು, ಆದರೆ ನಾನು ಸ್ಥಿರವಾಗಿ ನಿಂತೆ. ನನ್ನ ತಂದೆ ನನಗೆ ದೊಡ್ಡ ಸ್ಫೂರ್ತಿಯಾಗಿದ್ದರು. ನಾನು ಉತ್ತಮ ಉದ್ಯೋಗವನ್ನು ಪಡೆಯಬೇಕೆಂಬುದು ಅವರ ಕನಸಾಗಿತ್ತು. 2013 ರಲ್ಲಿ ಅವರು ನಿಧನ ಹೊಂದುವ ಮೊದಲು ನನಗಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಹಾಗಾಗಿ, ನಾನು ಅವರ ಕನಸನ್ನು ಈಡೇರಿಸಲು ಕಷ್ಟಪಟ್ಟು ಅಧ್ಯಯನ ಮಾಡಿದೆ “ಎಂದು ಸುರೇಶ್ ಹೇಳುತ್ತಾರೆ.
“ನನ್ನ ತಂದೆ ಆಟೋರಿಕ್ಷಾ ಚಾಲಕರಾಗಿದ್ದರು, ಬುಕ್ ಬೈಂಡಿಗ್ ಕೂಡ ಮಾಡುತ್ತಿದ್ದರು. ನಾನು ಅವರಿಗೆ ಸಹಾಯ ಮಾಡುತ್ತಿದ್ದೆ. ಅವರ ಮರಣದ ನಂತರ, ನಾನು ಟ್ಯೂಶನ್ ನೀಡಲು ಆರಂಭಿಸಿದೆ ಮತ್ತು ಬುಕ್ಬೈಂಡಿಂಗ್ ಕೂಡ ಮಾಡಿದೆ. ನಾನು ಜಮ್ಮು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ್ದು, ಅಲ್ಲಿ ನನಗೆ ಅಧ್ಯಯನ ಮಾಡಲು ಉತ್ತಮ ವೇದಿಕೆ ಸಿಕ್ಕಿತು “ಎಂದು ಅವರು ಹೇಳಿದ್ದಾರೆ.
ತನ್ನ ರಾಜ್ಯದ ಯುವಕರಿಗೆ ಸಂದೇಶ ನೀಡಿದ ಸುರೇಶ್, “ಇಂದಿನ ಯುವಕರು ಇಂಟರ್ನೆಟ್ ಮೂಲಕ ತಮ್ಮ ಗಮನವನ್ನು ಬೇರಡೆಗೆ ತಿರುಗಿಸಿಕೊಳ್ಳುತ್ತಾರೆ. ನಾನು ಯಾವುದೇ ಕೋಚಿಂಗ್ ತೆಗೆದುಕೊಳ್ಳಲಿಲ್ಲ, ಆದ್ದರಿಂದ ಇಂಟರ್ನೆಟ್ ನನಗೆ ಅಧ್ಯಯನಕ್ಕೆ ಪ್ರಮುಖ ಮೂಲವಾಯಿತು. ಯುವಕರು ಸಕಾರಾತ್ಮಕ ವಿಷಯಗಳನ್ನು ತೆಗೆದುಕೊಳ್ಳಬೇಕು, ಅದರಿಂದ ಲಾಭ ಪಡೆಯಬೇಕು ಮತ್ತು ಭವಿಷ್ಯವನ್ನು ರೂಪಿಸಬೇಕು” ಎಂದಿದ್ದಾರೆ.
ಸುರೇಶ್ ಅವರ ತಾಯಿ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, “ನನ್ನ ಪತಿ ಯಾವಾಗಲೂ ಸುರೇಶನನ್ನು ಕಲಿಯುವಂತೆ ಹೇಳುತ್ತಿದ್ದರು. ಆತನ ಕಲಿಕೆ ಅವರಿಗೆ ನಿಜವಾಗಿಯೂ ಕಠಿಣವಾಗಿತ್ತು. ನನ್ನ ಗಂಡನ ಮರಣದ ನಂತರ ಸುರೇಶ್ ಸಾಕಷ್ಟು ಶ್ರಮವಹಿಸಿದ್ದಾನೆ. ಇಂದು ಆತ ತನ್ನ ತಂದೆಯ ಕನಸನ್ನು ಈಡೇರಿಸಿದ್ದಕ್ಕೆ ಸಂತೋಷವಾಗುತ್ತಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.