ಬಹ್ರೇನ್: ತೈಲ ಸಮೃದ್ಧ ದೇಶವಾದ ಬಹ್ರೇನ್ಗೆ ಪ್ರಧಾನಿ ನರೇಂದ್ರ ಮೋದಿಯವರು ಚೊಚ್ಚಲ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ, ಮಾನವೀಯ ಸಂಕೇತವಾಗಿ ಆ ಗಲ್ಫ್ ರಾಷ್ಟ್ರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 250 ಭಾರತೀಯರಿಗೆ ಬಹ್ರೇನ್ ಸರ್ಕಾರ ಭಾನುವಾರ ಕ್ಷಮಾಪಣೆಯನ್ನು ನೀಡಿದೆ.
ಭಾರತೀಯ ಕೈದಿಗಳಿಗೆ ಕ್ಷಮಾಪಣೆಯನ್ನು ನೀಡಿದ್ದ ಬಹ್ರೇನ್ ನಾಯಕತ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೃತಜ್ಞತೆಯನ್ನು ಸಲ್ಲಿಸಿದರು.
ಅಧಿಕೃತ ಮಾಹಿತಿಯ ಪ್ರಕಾರ, 8,189 ಭಾರತೀಯರು ವಿದೇಶಗಳಲ್ಲಿ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅದರಲ್ಲಿ ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚು ಅಂದರೆ 1,811 ಕೈದಿಗಳು, ಯುಎಇನಲ್ಲಿ 1,392 ಕೈದಿಗಳು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಬಹ್ರೇನ್ ಗಲ್ಫ್ ಸಾಮ್ರಾಜ್ಯದಲ್ಲಿ ಎಷ್ಟು ಭಾರತೀಯರನ್ನು ಜೈಲುಗಳಲ್ಲಿ ಇರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
“ಮಾನವೀಯ ಸಂಕೇತವಾಗಿ, ಬಹ್ರೇನ್ನಲ್ಲಿ 250 ಭಾರತೀಯರಿಗೆ ಕೈದಿಗಳಿಗೆ ಅಲ್ಲಿನ ಸರ್ಕಾರ ಕ್ಷಮಾಪಣೆಯನ್ನು ನೀಡಿದೆ” ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ.
ದಯೆ ಮತ್ತು ಸಹಾನುಭೂತಿಯ ಈ ನಿರ್ಧಾರಕ್ಕಾಗಿ ಪ್ರಧಾನಿಯವರು ಬಹ್ರೇನ್ ರಾಜ ಮತ್ತು ಅಲ್ಲಿನ ಇಡೀ ರಾಯಲ್ ಫ್ಯಾಮಿಲಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ .
ಪ್ರಧಾನಿ ಮೋದಿಯವರ ಬಹ್ರೇನ್ ಭೇಟಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ಆ ದೇಶಕ್ಕೆ ನೀಡಿದ ಮೊದಲ ಭೇಟಿಯಾಗಿದೆ. ಮೋದಿಯವರು ಬಹ್ರೇನ್ ಪ್ರಿನ್ಸ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಬಳಿಕ, ಸಂಸ್ಕೃತಿ, ಬಾಹ್ಯಾಕಾಶ, ಸೌರಶಕ್ತಿ ಮತ್ತು ರುಪೇ ಕಾರ್ಡ್ ಆರಂಭದ ಬಗ್ಗೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
In a kind and humanitarian gesture, the Government of Bahrain has pardoned 250 Indians serving sentences in Bahrain.
PM @narendramodi thanks the Bahrain Government for the Royal Pardon.
— PMO India (@PMOIndia) August 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.