News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2018ರಲ್ಲಿ ಯಶಸ್ವಿಯಾದ ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಟೂರ್ ಅನ್ನು ಮರು ಪರಿಚಯಿಸಲಿದೆ ರೈಲ್ವೆ

ನವದೆಹಲಿ: ಕಳೆದ ವರ್ಷ ಭಾರಿ ಯಶಸ್ಸನ್ನು ಕಂಡಿದ್ದ ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಟೂರ್ ಅನ್ನು ಮರು ಪರಿಚಯಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ರಾಮಾಯಣದಲ್ಲಿ ಬರುವ ಐತಿಹಾಸಿಕ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಅವಕಾಶವನ್ನು ಇದು ಒದಗಿಸುತ್ತದೆ. ಶ್ರೀಲಂಕಾಗೂ ರೈಲಿನ ಮೂಲಕ ಪ್ರಯಾಣಿಸಬಹುದಾಗಿದೆ. ಕಳೆದ ವರ್ಷ ಭಾರತೀಯ ರೈಲ್ವೆ ಹಮ್ಮಿಕೊಂಡಿದ್ದ ಈ ಪ್ರವಾಸವು ಯಶಸ್ವಿಯಾಗಿತ್ತು.

ರೈಲ್ವೇಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಅಂಗ ಸಂಸ್ಥೆ ಐಆರ್­ಸಿಟಿಸಿ ಪ್ರವಾಸವನ್ನು ಆಯೋಜನೆ ಮಾಡುತ್ತಿದೆ. ರೂ. 16,065ಕ್ಕೆ 16 ದಿನ ಮತ್ತು 17 ರಾತ್ರಿಗಳ ಪಯಣದ ಮೂಲಕ ಭಾರತದಲ್ಲಿನ ರಾಮಾಯಣದ ಸ್ಥಳಗಳಿಗೆ ಭೇಟಿಯನ್ನು ನೀಡಬಹುದಾಗಿದೆ. ಶ್ರೀಲಂಕಾ ಭೇಟಿಗೆ ರೂ. 36,959 ಅನ್ನು ಪಾವತಿಸಬೇಕು. ಶ್ರೀಲಂಕಾದ ಬೇಟಿ ಚೆನ್ನೈನಿಂದ ಪ್ರಾರಂಭವಾಗುತ್ತದೆ.

ಇಂತಹ ಮೊದಲ ರೈಲು ನವೆಂಬರ್ 3 ರಂದು ರಾಜಸ್ಥಾನದ ಜೈಪುರದಿಂದ ಶ್ರೀರಾಮಾಯಣ ಯಾತ್ರಾ ಎಂಬ ಹೆಸರಿನಲ್ಲಿ ತನ್ನ ಪ್ರವಾಸವನ್ನು ಆರಂಭಿಸಲಿದೆ. ಮತ್ತೊಂದು ರೈಲು ನವೆಂಬರ್ 18ರಂದು ರಾಮಾಯಣ ಎಕ್ಸ್­ಪ್ರೆಸ್ ಎಂಬ ಹೆಸರಿನಲ್ಲಿ ಇಂದೋರ್­ನಿಂದ ಪ್ರಯಾಣವನ್ನು ಆರಂಭಿಸಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top