ರಾಂಚಿ: ಆರೋಗ್ಯಕರ ರಾಜ್ಯವನ್ನು ಹೊಂದುವ ದೃಷ್ಟಿಯಿಂದ ಝಾರ್ಖಂಡ್ ಸರ್ಕಾರ ಆಯುಷ್ಮಾನ್ ಭಾರತ್ ಗೋಲ್ಡನ್ ಕಾರ್ಡ್ ಮೇಲೆ ದರ ವಿಧಿಸುವುದನ್ನು ರದ್ದುಪಡಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೊದಲ ವಾರ್ಷಿಕೋತ್ಸವಕ್ಕೂ ಮುನ್ನ ಎಲ್ಲಾ ಫಲಾನುಭವಿಗಳಿಗೆ ಗೋಲ್ಡನ್ ಕಾರ್ಡ್ ನೀಡುವ ಉದ್ದೇಶವನ್ನು ಅಲ್ಲಿನ ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರ್ಕಾರ ಹೊಂದಿದೆ.
ಅಲ್ಲದೆ, ನಗರಗಳಲ್ಲಿ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಝಾರ್ಖಾಂಡ್ ಸರ್ಕಾರ ತನ್ನ ರಾಜ್ಯದ ವಿವಿಧ ಭಾಗಗಳಲ್ಲಿ ಅಟಲ್ ಮೊಹಲ್ಲಾ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯತಿಥಿ ಸಂದರ್ಭದಲ್ಲಿ ಮುಖ್ಯಮಂತ್ರಿ ರಘುಬರ್ ದಾಸ್ ಶುಕ್ರವಾರ ಕ್ಲಿನಿಕ್ ಅನ್ನು ಉದ್ಘಾಟಿಸಿದ್ದಾರೆ.
ಆರಂಭದಲ್ಲಿ, 15 ಜಿಲ್ಲೆಗಳಲ್ಲಿ ಒಟ್ಟು 25 ಕ್ಲಿನಿಕ್ಗಳನ್ನು ಸ್ಥಾಪಿಸಲಾಗುತ್ತದೆ. ಸೆಪ್ಟೆಂಬರ್ 25ರೊಳಗೆ ಇಂತಹ 100 ಕ್ಲಿನಿಕ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಕ್ಲಿನಿಕ್ಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳ ಜನಸಾಮಾನ್ಯರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡುವ ಗುರಿಯನ್ನು ಹೊಂದಿವೆ. ಈ ಕ್ಲಿನಿಕ್ಗಳಲ್ಲಿ ರೋಗಿಗಳಿಗೆ ಔಷಧಿಗಳ ಜೊತೆಗೆ ಉಚಿತ ವೈದ್ಯಕೀಯ ಸೌಲಭ್ಯಗಳು ಸಿಗುತ್ತವೆ. ರಾಂಚಿ, ಧನ್ವಾಡ್ ಮತ್ತು ಪಶ್ಚಿಮ ಸಿಂಗ್ಭೂಮ್ನಲ್ಲಿ ಇಂತಹ 4 ಚಿಕಿತ್ಸಾಲಯಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಬೊಕಾರೊ, ದಿಯೋಘರ್ ಮತ್ತು ಹಜಾರಿಬಾಗ್ನಲ್ಲಿ ತಲಾ 2 ಕ್ಲಿನಿಕ್ಗಳಿವೆ.
ಟಿನ್ಪ್ಲೇಟ್ ಟೌನ್ಶಿಪ್ನಲ್ಲಿ ‘ಟಾಟಾ ಮೈನ್ ಹಾಸ್ಪಿಟಲ್ (ಟಿಎಂಹೆಚ್) ಗೋಲ್ಮುರಿ’ ಹೆಸರಿನ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಫಲಾನುಭವಿಗಳಿಗಾಗಿ ಮೀಸಲಾಗಿರುವ ದೇಶದ ಮೊದಲ ಆಸ್ಪತ್ರೆಯನ್ನು ಸಿಎಂ ರಘುಬರ್ ದಾಸ್ ಉದ್ಘಾಟಿಸಿದ್ದಾರೆ. 30 ಹಾಸಿಗೆಗಳ ಈ ಆಸ್ಪತ್ರೆಯು ಈಗಿರುವ ಟಿನ್ಪ್ಲೇಟ್ ಆಸ್ಪತ್ರೆಯ ಹಿಂಬದಿಯಲ್ಲಿಯೇ ಇದೆ. ಟಾಟಾ ಸ್ಟೀಲ್ ನಿರ್ವಹಿಸುವ ಈ ಆಸ್ಪತ್ರೆಯು ಮೂಳೆಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮಕ್ಕಳ ಮತ್ತು ಸಾಮಾನ್ಯ ಚಿಕಿತ್ಸೆ ಸೌಲಭ್ಯಗಳನ್ನು ಒಳಗೊಂಡಿದ್ದು, 24 × 7 ಸೇವೆ ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.