ಅಗರ್ತಾಲ: 1992 ರಲ್ಲಿ ತ್ರಿಪುರಾ ಗಡಿಯಲ್ಲಿ ತನ್ನ ಪತಿ ಹುತಾತ್ಮರಾದ ದಿನದಿಂದ ಪ್ರಾರಂಭವಾದ ಯೋಧನ ಪತ್ನಿಯ 27 ವರ್ಷದ ಸುದೀರ್ಘ ಹೋರಾಟವು ಈ ಸ್ವಾತಂತ್ರ್ಯ ದಿನಾಚರಣೆಯಂದು ಮುಕ್ತಾಯಗೊಂಡಿದೆ.
ಬಿಎಸ್ಎಫ್ ಯೋಧ ಮೋಹನ್ ಸಿಂಗ್ ಸುನರ್ ಅವರ ಪತ್ನಿ ರಾಜೋ ಬಾಯಿ ಇಂದೋರ್ ಜಿಲ್ಲೆಯ ಪೀರ್ ಪಿಪ್ಲಾಯಾ ಗ್ರಾಮದಲ್ಲಿ ಕಚ್ಛಾ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಅವರ ಇಬ್ಬರು ಗಂಡು ಮಕ್ಕಳನ್ನು ಬೆಳೆಸಲು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಆದರೆ 45 ವರ್ಷದ ರಾಜೋ ಅವರ ಸಂಕಷ್ಟ ಕೊನೆಗೊಂಡಿದೆ, ಇಂದೋರ್ನ 6 ಹಳ್ಳಿಗಳ ಯುವಕರು ಗುರುವಾರ ಅವರಿಗೆ ರಾಖಿ ಉಡುಗೊರೆಯಾಗಿ ಪುಕ್ಕಾ ಮನೆಯನ್ನು ನೀಡಿದ್ದಾರೆ.
“ನಾವು ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಎನ್ಜಿಒಗೆ ಸೇರಿದವರಲ್ಲ. ನಾವು ನಮ್ಮ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇವೆ. ಕಳೆದ ವರ್ಷ, ನಾವು ಪೀರ್ ಪಿಪಾಲಿಯಾ ಗ್ರಾಮಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ಹುತಾತ್ಮ ಮೋಹನ್ ಸಿಂಗ್ ಅವರ ಕುಟುಂಬವು ಕಚ್ಚಾ ಮನೆಯಲ್ಲಿ ವಾಸಿಸುತ್ತಿದೆ ಎಂಬುದು ನಮಗೆ ತಿಳಿದುಬಂದಿದೆ. ಅವರ ಪತ್ನಿ ರಾಜೊ ತನ್ನ ಮಕ್ಕಳನ್ನು ಬೆಳೆಸಲು ಹಲವು ಸವಾಲುಗಳ ವಿರುದ್ಧ ಹೋರಾಡುತ್ತಿದ್ದರು. ಕುಟುಂಬವು ಅರ್ಹವಾದ ಗೌರವವನ್ನು ಕೂಡ ಪಡೆದಿರಲಿಲ್ಲ. ಪಿಂಚಣಿ ಹೊರತುಪಡಿಸಿ, ಈ ಕುಟುಂಬವು ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆಯಲಿಲ್ಲ” ಎಂದು ಸಹಾಯ ಮಾಡಿದ ಸದಸ್ಯರಲ್ಲಿ ಒಬ್ಬರಾದ ವಿಶಾಲ್ ರತಿ ಹೇಳಿದ್ದಾರೆ.
ರತಿ ಪ್ರಕಾರ, ಹಳ್ಳಿಯ ಯುವಕರು ಸಶಸ್ತ್ರ ಪಡೆಗಳಿಗೆ ಸೇರಲು ಯಾವುದೇ ಉತ್ಸಾಹವನ್ನು ಇದುವರೆಗೆ ಪ್ರದರ್ಶಿಸಿಲ್ಲ. ಇದಕ್ಕೆ ಹುತಾತ್ಮನ ಮನೆಯವರ ದುರ್ಗತಿಯೂ ಕಾರಣವಾಗಿರಬಹುದು, ಈ ಕುಟುಂಬವನ್ನು ನೋಡಿ ಯುವಕರ ಸೇನೆ ಸೇರುವ ಪ್ರೇರಣೆ ಕುಂಠಿತವಾಗಿರಬಹುದು.
“ನಾವು ಕುಟುಂಬಕ್ಕೆ ಸಹಾಯ ಮಾಡಲು ಈ ಪ್ರದೇಶದಲ್ಲಿ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ನಾವು 11 ಲಕ್ಷ ರೂ. ಹಣವನ್ನು ಸಂಗ್ರಹಿಸಿ ರಾಜೋ ಸಿಂಗ್ಗೆ ಮನೆ ನಿರ್ಮಿಸಿದ್ದೇವೆ. ನಾವು ಮೋಹನ್ ಸಿಂಗ್ ಅವರ ಪ್ರತಿಮೆ ಅನ್ನು ಸಹ ಸ್ಥಾಪಿಸಲಿದ್ದೇವೆ ”ಎಂದು ಮತ್ತೊಬ್ಬ ಸದಸ್ಯ ಶಂಕರ್ ಶರ್ಮಾ ಹೇಳಿದ್ದಾರೆ.
ಇದರಿಂದ ಸೇನೆ ಸೇರಲು ಇತರ ಯುವಕರಿಗೆ ಪ್ರೇರಣೆ ಸಿಗಬಹುದು ಎಂಬುದು ಅವರು ಅಭಿಪ್ರಾಯ.
ರಾಜೋ ಬಾಯಿ ಮಾತನಾಡಿ, “ನನ್ನ ಪತಿ ಸೇನೆ ಸೇರ್ಪಡೆಗೊಂಡ ಮೂರು ವರ್ಷಗಳ ನಂತರ ನಿಧನರಾದರು. ನನಗೆ ಆಗ ಕೇವಲ 18 ವರ್ಷ ಮತ್ತು ನನ್ನ ಕಿರಿಯ ಮಗ ಇನ್ನು ಹುಟ್ಟಬೇಕಿತ್ತಷ್ಟೇ. ನನ್ನ ಗಂಡನ ಮರಣದ ನಂತರ ನಮಗೆ ಎಷ್ಟು ಹಣ ದೊರೆಯಿತು ಎಂದು ನನಗೆ ನಿಖರವಾಗಿ ನೆನಪಿಲ್ಲ. ಆದರೆ ಅದು ಎಷ್ಟೋ ಸಾವಿರವಾಗಿತ್ತು. ಅಲ್ಪ ಪ್ರಮಾಣದ ಪಿಂಚಣಿಯನ್ನು ನಾವು ಪಡೆಯುತ್ತಿದ್ದೇವೆ. ಈಗ ನಮ್ಮ ಪಿಂಚಣಿಯನ್ನು 2500 ರೂಗಳಿಗೆ ಹೆಚ್ಚಿಸಲಾಗಿದೆ, ನನ್ನ ಮನೆಯಲ್ಲಿನ ಎಲ್ಲಾ ಖರ್ಚುಗಳನ್ನು ನಾನೇ ನಿರ್ವಹಿಸುತ್ತೇನೆ” ಎಂದಿದ್ದಾರೆ.
ಯುವಕರ ಕಾರ್ಯದಿಂದ ಈಗ ನನ್ನ ಅಮ್ಮನ ಮುಖದಲ್ಲಿ ನಗು ಮೂಡಿದೆ ಎಂದು ರಾಜೋ ಅವರ ಮಗ ಹೇಳುತ್ತಾನೆ.
ಯುವಕರ ಕಾರ್ಯವನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯೂ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.