ಚಂಡೀಗಢ: ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸಿ ಮತ್ತು ಅನ್ಯಾಯವನ್ನು ವಿರೋಧಿಸಿ ಎಂದು ಭಾರತೀಯ ಸೇನೆಯಲ್ಲಿರುವ ಪಂಜಾಬಿ ಯೋಧರಿಗೆ ಕರೆ ನೀಡಿರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಫವಾದ್ ಚೌಧುರಿ ವಿರುದ್ಧ ಕೇಂದ್ರ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಕಿಡಿಕಾರಿದ್ದು, ಇಂತಹ ಹೇಳಿಕೆ ಅವರ ಹತಾಶೆ ಮತ್ತು ನಟೋರಿಯಸ್ ಚಿಂತನೆಯನ್ನು ತೋರಿಸುತ್ತದೆ ಎಂದಿದ್ದಾರೆ.
“ಕಾಶ್ಮೀರದಲ್ಲಿ ಕರ್ತವ್ಯ ನಿರಾಕರಿಸುವಂತೆ ಸೇನೆಯ ಪಂಜಾಬ್ ಯೋಧರಿಗೆ ಕರೆ ನೀಡಿರುವುದು ಪಾಕ್ ಸಚಿವರ ಹತಾಶ ಟ್ವೀಟ್ ಮತ್ತು ಅಸಹ್ಯಕರ ಚಿಂತನೆಗಳನ್ನು ಬಹಿರಂಗಪಡಿಸುತ್ತದೆ. ಪಂಜಾಬಿಗಳು ದೇಶಭಕ್ತರು, ಅವರ ರಾಷ್ಟ್ರದ ವಿಷಯಕ್ಕೆ ಬಂದಾಗ ಯಾವುದೇ ತ್ಯಾಗವು ಹಿಂಜರಿಯುವುದಿಲ್ಲ. ಕರ್ತವ್ಯ ನಿರ್ವಹಿಸುವಲ್ಲಿ ಪಂಜಾಬಿ ಸೈನಿಕರಿಗೆ ನಿಮ್ಮ ಪಾಠದ ಅಗತ್ಯವಿಲ್ಲ” ಎಂದು ಕೌರ್ ಅವರು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೂಡ ಫವಾದ್ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದು, ಭಾರತದ ಆಂತರಿಕ ವಿಷಯಗಳ ಬಗ್ಗೆ ಮೂಗು ತೂರಿಸಲು ಬರದಂತೆ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ಭಾರತ ರದ್ದುಪಡಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಈ ನಡುವೆ ಉಭಯ ದೇಶಗಳ ನಾಯಕರ ನಡುವೆ ವಾಕ್ ಸಮರಗಳೂ ನಡೆಯುತ್ತಿವೆ.
ಇತ್ತೀಚೆಗೂ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಪಂಜಾಬ್ ಸೈನಿಕರು ನಿರಾಕರಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಪಾಕಿಸ್ಥಾನದವರೇ ಈ ಸುದ್ದಿಯನ್ನು ಹರಿಬಿಟ್ಟಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.