ಅಲಹಾಬಾದ್: ಪಾಕಿಸ್ಥಾನ ಇಂದು ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಂಗಳವಾರ ತಡರಾತ್ರಿ ಅಲಹಾಬಾದ್ನ ಭಜರಂಗದಳದ ಘಟಕವು ‘ಅಖಂಡ ಭಾರತ’ಕ್ಕಾಗಿ ಪ್ರತಿಜ್ಞೆಯನ್ನು ಮಾಡಿದೆ.
ಪಾಕಿಸ್ಥಾನದ ಸ್ವಾತಂತ್ರ್ಯ ದಿನವನ್ನು ‘ಅಖಂಡ ಭಾರತ ಸಂಕಲ್ಪ ದಿವಸ್’ ಎಂದು ಭಜರಂಗ ದಳ ಆಚರಿಸಿದ್ದು, ಇದು ಅಖಂಡ ಭಾರತಕ್ಕಾಗಿ ಪ್ರತಿಜ್ಞೆ ಮಾಡುವ ದಿನ ಎಂದು ಅದು ಹೇಳಿಕೊಂಡಿದೆ. ಹೆಚ್ಚಿನ ಸಂಖ್ಯೆಯ ಭಜರಂಗದಳದ ಸದಸ್ಯರು ನಗರದಲ್ಲಿ ಜಮಾವಣೆಗೊಂಡು ಭಾರತ ಮಾತೆಯ ದೊಡ್ಡ ಪೋಸ್ಟರ್ ಅನ್ನು ರಸ್ತೆಯ ಮೇಲಿಟ್ಟು ಅದರ ಮುಂದೆ ಅಖಂಡ ಭಾರತದ ಪ್ರತಿಜ್ಞೆಯನ್ನು ಮಾಡಿದ್ದಾರೆ.
ಪೂರ್ವದ ಬಾಂಗ್ಲಾದೇಶದಿಂದ ಪಶ್ಚಿಮದಲ್ಲಿ ಅಫ್ಘಾನಿಸ್ತಾನಕ್ಕೆ ಹರಡಿರುವ ಅಖಂಡ ಭಾರತದ ನಕ್ಷೆಯನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಪೋಸ್ಟರ್ನ ಸುತ್ತಲೂ ಮಣ್ಣಿನ ದೀಪಗಳನ್ನು ಬೆಳಗಿಸಿದರು, ಆದರೆ ಭಾರತದ ವೈಭವವನ್ನು ಬಣ್ಣಿಸಿ ಘೋಷಣೆಗಳನ್ನು ಕೂಗಿದರು.
ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸೇರಿದಂತೆ ಹಲವು ರಾಜಕೀಯ ಮತ್ತು ಧಾರ್ಮಿಕ ಸಂಘಟನೆಗಳು ಪಾಕ್ ಆಕ್ರಮಿತ ಕಾಶ್ಮೀರವನ್ನು ಒಳಗೊಂಡ ‘ಅಖಂಡ ಭಾರತ’ದ ಬೇಡಿಕೆಯನ್ನು ತೀವ್ರಗೊಳಿಸಿವೆ.
ಪಾಕಿಸ್ಥಾನವು ಆಗಸ್ಟ್ 14 ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಈ ದಿನ 1947 ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಅದು ಸ್ವಾತಂತ್ರ್ಯವನ್ನು ಪಡೆಯಿತು ಮಾತ್ರವಲ್ಲ ಭಾರತದಿಂದ ತುಂಡರಿಸಲ್ಪಟ್ಟಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.