ನವದೆಹಲಿ: ಅಂಗಾಂಗ ದಾನಿಗಳ ಕೊರತೆಯಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಪ್ರತಿ ಮಿಲಿಯನ್ಗೆ ಕೇವಲ ಒಬ್ಬರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ಭಾರತದಲ್ಲಿ ಅಂಗಾಂಗ ದಾನ ವಿಶ್ವದಲ್ಲೇ ಅತೀ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.
“ಅಂಗಾಂಗ ದಾನದ ತೀವ್ರ ಕೊರತೆ ಇರುವುದರಿಂದ ಪ್ರತಿ ವರ್ಷ ಸರಾಸರಿ ಅರ್ಧ ಮಿಲಿಯನ್ ಜನರು ಸಾಯುತ್ತಿದ್ದಾರೆ” ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಮೂತ್ರಪಿಂಡ ಕಸಿ ವಿಭಾಗದ ಅಧ್ಯಕ್ಷ ಮತ್ತು ರಾಷ್ಟ್ರೀಯ ಅಂಗ ಅಂಗಾಂಶ ಕಸಿ ಸಂಸ್ಥೆ (ನೋಟೊ)ದ ಸದಸ್ಯ ಡಾ.ಎಚ್. ಜೌಹರಿ ಹೇಳಿದ್ದಾರೆ.
ಮಂಗಳವಾರ ವಿಶ್ವ ಅಂಗಾಂಗ ದಾನ ದಿನವನ್ನು ಆಚರಿಸಲಾಗಿದೆ.
ಮೆದುಳು ನಿಷ್ಕ್ರಿಯಗೊಂಡ ಸಂದರ್ಭದಲ್ಲೂ ರೋಗಿಗೆ ಆರು ಜೀವಗಳನ್ನು ಉಳಿಸುವ ಸಾಮರ್ಥ್ಯ ಇರುತ್ತದೆ. ಸತ್ತ ವ್ಯಕ್ತಿಯ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಪಿತ್ತಜನಕಾಂಗ ಮತ್ತು ಕರುಳನ್ನು ಕಾರ್ನಿಯಾಸ್, ಅಂಗಾಂಶ ಮತ್ತು ಚರ್ಮದಂತಹ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಆದರೆ ಭಾರತದಲ್ಲಿ ಅಂಗಾಂಗ ದಾನ ಮಾಡಲು ಮುಂದಾಗುವವರ ಪ್ರಮಾಣ ಅತೀವ ಕಡಿಮೆ ಇದೆ.
“ಪ್ರತಿವರ್ಷ ಸರಾಸರಿ ಅರ್ಧ ಮಿಲಿಯನ್ ಜನರು ಅಂಗಗಳ ಕೊರತೆಯಿಂದ ಸಾಯುತ್ತಿದ್ದಾರೆ, ಯಾಕೆಂದರೆ ರೋಗಿಗಳಿಗೆ ಕೊನೆಯ ಹಂತದಲ್ಲಿ ಅಂಗಾಂಗ ವೈಫಲ್ಯವಾಗಿದೆ ಎಂದು ಘೋಷಿಸಿದಾಗ ಅಂಗಾಂಗ ದಾನದ ತೀವ್ರ ಕೊರತೆಯಿರುತ್ತದೆ” ಎಂದು ಡಾ. ಜೌಹರಿ ಹೇಳಿದ್ದಾರೆ
ಅಂಗಾಗ ವೈಫಲ್ಯಕ್ಕೆ ತುತ್ತಾಗುವವರ ಪೈಕಿ ಮೂತ್ರಪಿಂಡ ವೈಫಲ್ಯವನ್ನು ಅನುಭವಿಸುವವರು ಜಾಸ್ತಿ. ಪ್ರತಿ ವರ್ಷ ಸರಾಸರಿ ಎರಡು ಲಕ್ಷ ಜನರು ಮೂತ್ರಪಿಂಡ ವೈಫಲ್ಯವನ್ನು ಹೊಂದುತ್ತಾರೆ ಎಂದು ಡಾ. ಜೌಹರಿ ಹೇಳುತ್ತಾರೆ.
“ಸುಮಾರು 30,000 ರಿಂದ 40,000 ರೋಗಿಗಳು ಹೃದಯ ವೈಫಲ್ಯದಿಂದ ಬಳಲುತ್ತಿದ್ದಾರೆ ಮತ್ತು ಅದೇ ರೀತಿ 50,000 ರಿಂದ 60,000 ರೋಗಿಗಳಿಗೆ ಪಿತ್ತಜನಕಾಂಗದ ಕಸಿ ಅಗತ್ಯವಿರುತ್ತದೆ. ಕಾರ್ನಿಯಾ ಸಮಸ್ಯೆಯಿಂದ ಕುರುಡರಾಗಿರುವ 10 ಲಕ್ಷ ಜನರಿದ್ದಾರೆ. ಸಾಂಕ್ರಾಮಿಕವಲ್ಲದ ಕಾಯಿಲೆ ಇದಕ್ಕೆ ಮುಖ್ಯ ಕಾರಣಗಳಾಗಿವೆ. ಅಂಗಗಳ ಅವಶ್ಯಕತೆ ದೊಡ್ಡದಾಗಿದೆ ಮತ್ತು ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ “ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.