ನವದೆಹಲಿ: ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ವೇಳೆಗೆ ಭಾರತವನ್ನು ಸ್ವಚ್ಛವಾಗಿಸುವ ಮತ್ತು ಬಯಲು ಶೌಚ ಮುಕ್ತವಾಗಿಸುವ ಉದ್ದೇಶದೊಂದಿಗೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸ್ವಚ್ಛ ಸರ್ವೇಕ್ಷಣ್ 2020 ಲೀಗ್ಗೆ ಚಾಲನೆಯನ್ನು ನೀಡಿದ್ದಾರೆ.
ಈ ವೇಳೆ ಗಾಯಕ ಕೈಲಾಶ್ ಖೇರ್ ಮತ್ತು ಮೊನಾಲಿ ಠಾಕೂರ್ ಹಾಡಿದ ಸ್ವಚ್ಛತೆಯ ಗೀತೆಯನ್ನು ಬಿಡುಗಡೆಗೊಳಿಸಿದರು. ಈ ಗೀತೆಯ ವೀಡಿಯೋದಲ್ಲಿ ‘ಮಣಿಕರ್ಣಿಕಾ’ ಖ್ಯಾತಿಯ ಕಂಗನಾ ರಣಾವತ್ ಕೂಡ ಇದ್ದಾರೆ.
ಸ್ವಚ್ಛ ಸರ್ವೇಕ್ಷಣ್ 2020 ಲೀಗ್ ಭಾರತದ ನಗರಗಳು ಮತ್ತು ಪಟ್ಟಣಗಳ ತ್ರೈಮಾಸಿಕ ಸ್ವಚ್ಛತೆಯ ಮೌಲ್ಯಮಾಪನವಾಗಿದ್ದು, 2020 ರ ಜನವರಿ – ಫೆಬ್ರವರಿ ನಡುವೆ ನಡೆಯಲಿರುವ ಭಾರತದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ 5 ನೇ ಆವೃತ್ತಿಯೊಂದಿಗೆ ಇದನ್ನು ಸಂಯೋಜನೆಗೊಳಿಸಲಾಗುತ್ತದೆ.
ಮೂರನೇ ಸ್ವತಂತ್ರ ಸಂಸ್ಥೆಯಿಂದ (Third Party) ನಡೆಸಲ್ಪಡುವ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯ ಉದ್ದೇಶವು, ಸ್ವಚ್ಛತಾ ಆಂದೋಲನದಲ್ಲಿ ದೊಡ್ಡ ಪ್ರಮಾಣದ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಕಸ ಮುಕ್ತ ಮತ್ತು ಬಯಲು ಮಲವಿಸರ್ಜನೆ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೈಗೊಂಡ ಉಪಕ್ರಮಗಳ ಸುಸ್ಥಿರತೆಯನ್ನು ಖಚಿತಪಡಿಸುವುದು.
ಮೂರನೇ ವ್ಯಕ್ತಿಯ ಪ್ರಮಾಣೀಕರಣದಿಂದ ಮೌಲ್ಯೀಕರಿಸಲ್ಪಟ್ಟ ವಿಶ್ವಾಸಾರ್ಹ ಫಲಿತಾಂಶಗಳನ್ನು ಒದಗಿಸಲು, ಆನ್ಲೈನ್ ಪ್ರಕ್ರಿಯೆಗಳ ಮೂಲಕ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಸಾಂಸ್ಥೀಕರಣಗೊಳಿಸಲು ಮತ್ತು ಪಟ್ಟಣಗಳು ಮತ್ತು ನಗರಗಳನ್ನು ವಾಸಿಸಲು ಉತ್ತಮ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಮಹತ್ವದ ಬಗ್ಗೆ ಸಮಾಜದ ಎಲ್ಲಾ ವರ್ಗದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೂ ಇದು ಒಳಗೊಂಡಿದೆ.
ಸಮೀಕ್ಷೆಯು ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಮನೋಭಾವವನ್ನು ಬೆಳೆಸುತ್ತದೆ ಮತ್ತು ನಾಗರಿಕರಿಗೆ ಸ್ವಚ್ಛತಾ ಸೇವೆಯಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡುತ್ತದೆ.
Union Minister @HardeepSPuri launches Swachh Anthem at the launch of #SwachhSurvekshan2020 pic.twitter.com/NvfRLXw8rx
— PIB India (@PIB_India) August 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.