ಡೆಹ್ರಾಡೂನ್: ಕಳೆದು ಹೋದ ಸಂಸ್ಕೃತದ ಗತ ವೈಭವವನ್ನು ಮರಳಿ ಪಡೆಯುವ ಸಲುವಾಗಿ, ಹಿಮಾಚಲ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಗಳು ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಕಲಿಸಲು ಮುಂದಾಗಿವೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸೋಮವಾರ ಘೋಷಣೆ ಮಾಡಿದ್ದಾರೆ.
ಹಿಮಾಚಲದ ರಾಜ್ಯ ಸಂಸ್ಕೃತ ಶಿಕ್ಷಕ್ ಪರಿಷತ್, ಹಿಮಾಚಲ ಸಂಸ್ಕೃತ ಅಕಾಡೆಮಿ, ಹಿಮಾಚಲ ಸಂಸ್ಕೃತಿ ಮತ್ತು ಕಲಾ ಅಕಾಡೆಮಿ, ಸಂಸ್ಕೃತ ಭಾರತಿ ಹಿಮಾಚಲ ಪ್ರದೇಶ ಆಯೋಜಿಸಿದ್ದ ‘ಸಂಸ್ಕೃತ ಸಪ್ತಾಹ’ ಕಾರ್ಯಕ್ರಮದ ಸಮಾರೋಪ ಸಮಾರಂಭ ‘ಸಂಸ್ಕೃತ ಅಭಿನಂದನ್ ಸಮರೋಹ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಮಾಚಲ ಪ್ರದೇಶ ವಿಧಾನಸಭೆಯು ಫೆಬ್ರವರಿಯಲ್ಲಿ ಸಂಸ್ಕೃತವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡುವ ಮಸೂದೆಯನ್ನು ಅಂಗೀಕರಿಸಿತು.
ಸಂಸ್ಕೃತ ಭಾಷೆಯ ಕಳೆದುಹೋದ ವೈಭವವನ್ನು ಮರಳಿ ಪಡೆಯುವ ಸಲುವಾಗಿ ಹಿಮಾಚಲಪ್ರದೇಶದಲ್ಲಿ ಸಂಸ್ಕೃತವನ್ನು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಸಂಸ್ಕೃತ ಭಾಷೆ ಭಾರತೀಯ ಸಂಪ್ರದಾಯ ಮತ್ತು ಚಿಂತನೆಯ ನಿಜವಾದ ಸಂಕೇತವಾಗಿದೆ, ಈ ಭಾಷೆ ಸತ್ಯದ ಹುಡುಕಾಟದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರದರ್ಶಿಸುತ್ತದೆ, ಸಾರ್ವತ್ರಿಕ ಸತ್ಯದ ಕಡೆಗೆ ದಾರಿಯನ್ನು ಇದು ತೋರಿಸಿದೆ. ಈ ವಿಶಿಷ್ಟ ಭಾಷೆಯು ಈ ದೇಶದ ಜನರ ಬುದ್ಧಿವಂತಿಕೆಯ ಭಂಡಾರವನ್ನು ಹೊಂದಿರುವುದು ಮಾತ್ರವಲ್ಲ, ಸರಿಯಾದ ಜ್ಞಾನವನ್ನು ಪಡೆಯಲು ಸಾಟಿಯಿಲ್ಲದಂತಹ ಮತ್ತು ಸ್ಪಷ್ಟ ಮಾರ್ಗವನ್ನೂ ತೋರಿಸುತ್ತದೆ ”ಎಂದು ಅವರು ಹೇಳಿದ್ದಾರೆ.
ಸಂಸ್ಕೃತವು ವಿಶ್ವದ ಅತ್ಯಂತ ಸಮರ್ಥ ಕಂಪ್ಯೂಟರ್ ಆಧಾರಿತ ಭಾಷೆಯಾಗಿದೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಭಾಷೆಯನ್ನು ಕಲಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.
“ಕಳೆದುಹೋದ ಭಾಷೆಯ ವೈಭವವನ್ನು ಮರಳಿ ಪಡೆಯಲು ನಾವು ಸಂಸ್ಕೃತವನ್ನು ಸಾಮಾನ್ಯ ಜನರಲ್ಲಿ ಜನಪ್ರಿಯಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಅವರು ಹೇಳಿದರು, ಪ್ರಸಕ್ತ ಹಣಕಾಸು ವರ್ಷದಲ್ಲಿ 50 ಶಾಲೆಗಳು ಮತ್ತು 50 ಕಾಲೇಜುಗಳಲ್ಲಿ ಸಂಸ್ಕೃತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದರು.
ರಾಜ್ಯ ಶಿಕ್ಷಣ ಸಚಿವ ಸುರೇಶ್ ಭರದ್ವಾಜ್ ಮಾತನಾಡಿ, ಸಂಸ್ಕೃತ ಮಂತ್ರಗಳನ್ನು ಲಕ್ಷಾಂತರ ಹಿಂದೂಗಳು ಪಠಿಸುತ್ತಾರೆ ಮತ್ತು ಹೆಚ್ಚಿನ ದೇವಾಲಯದ ಕಾರ್ಯಗಳನ್ನು ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸಲಾಗುತ್ತದೆ, ಸಾಮಾನ್ಯವಾಗಿ ಇದು ವೈದಿಕ ರೂಪದಲ್ಲಿರುತ್ತದೆ. ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್ ಮತ್ತು ಸ್ಪಿಟಿಯ ಹಳ್ಳಿಯಲ್ಲಿ ಜನರು ಸಂಸ್ಕೃತವನ್ನು ಮುಖ್ಯವಾಗಿ ಮಾತನಾಡುತ್ತಾರೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.