ನವದೆಹಲಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಭಾರತ ಮತ್ತು ಪಾಕಿಸ್ಥಾನಗಳ ನಡುವಣ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಈ ನಡುವೆ, ಪ್ರಸ್ತುತ ಪಾಕಿಸ್ಥಾನದ ಪಡೆಗಳು ಲಡಾಖ್ಗೆ ಸಮೀಪದಲ್ಲಿರುವ ತಮ್ಮ ನೆಲೆಗಳಿಗೆ ಯುದ್ಧೋಪಕರಣಗಳನ್ನು ಸಾಗಿಸುವ ಕಾರ್ಯವನ್ನುನಡೆಸುತ್ತಿತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
“ಶನಿವಾರ ಪಾಕಿಸ್ಥಾನ ವಾಯುಸೇನೆಯು ತನ್ನ ಮೂರು ಸಿ -130 ಸಾರಿಗೆ ವಿಮಾನಗಳನ್ನು ಬಳಸಿ ಲಡಾಖ್ ಸಮೀಪದ ಸ್ಕಾರ್ಡು ವಾಯುನೆಲೆಗೆ ಯುದ್ಧೋಪಕರಣಗಳನ್ನು ಸಾಗಾಣೆ ಮಾಡಿದೆ. ಸಂಬಂಧಪಟ್ಟ ಭಾರತೀಯ ಏಜೆನ್ಸಿಗಳು ಗಡಿ ಪ್ರದೇಶಗಳ ಬಳಿಯಲ್ಲಿನ ಪಾಕಿಸ್ಥಾನಿಗಳ ಚಲನವಲನಗಳ ಮೇಲೆ ನಿಗಾ ಇಡುತ್ತಿವೆ “ಸರ್ಕಾರಿ ಮೂಲಗಳು ತಿಳಿಸಿವೆ.
ಫಾರ್ವರ್ಡ್ ಆಪರೇಟಿಂಗ್ ಬೇಸ್ಗೆ ಪಾಕಿಸ್ಥಾನ ಸ್ಥಳಾಂತರಿಸಿರುವ ಉಪಕರಣಗಳು ಯುದ್ಧ ವಿಮಾನ ಕಾರ್ಯಾಚರಣೆಗೆ ಬೆಂಬಲ ನೀಡುವ ಸಾಧನಗಳಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಪಾಕಿಸ್ಥಾನಿಗಳು ತಮ್ಮ ಜೆಎಫ್ -17 ಯುದ್ಧ ವಿಮಾನಗಳಲ್ಲಿ ಸ್ಕಾರ್ಡು ವಾಯುನೆಲೆಗೆ ತೆರಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪಾಕಿಸ್ಥಾನದ ಸಂಪೂರ್ಣ ಉದ್ದ ಅಗಲಕ್ಕೂ ಪಾಕ್ ವಾಯುಸೇನೆ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಮತ್ತು ವಾಯುಪಡೆ ಮತ್ತು ಸೇನೆಗಳು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿವೆ.
ಪಾಕಿಸ್ಥಾನ ವಾಯುಪಡೆಯು ತನ್ನ ವಾಯುಪಡೆ ಮತ್ತು ಸೇನೆಗಳ ಸಮರಾಭ್ಯಾಸವನ್ನು ನಡೆಸಲು ಯೋಜಿಸುತ್ತಿದೆ ಮತ್ತು ವಿಮಾನಗಳನ್ನು ಫಾರ್ವರ್ಡ್ ಬೇಸ್ಗೆ ಸ್ಥಳಾಂತರಿಸುವಿಕೆಯು ಅದರ ಒಂದು ಭಾಗವಾಗಿರಲೂ ಬಹುದು ಎಂದು ಮೂಲಗಳು ತಿಳಿಸಿವೆ. ಸ್ಕಾರ್ಡು ಪಾಕಿಸ್ಥಾನ ವಾಯುಸೇನೆಯ ಫಾರ್ವರ್ಡ್ ಆಪರೇಟಿಂಗ್ ಬೇಸ್ ಆಗಿದ್ದು, ಇದನ್ನು ಭಾರತದ ಗಡಿಯಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸಲು ಅದು ಬಳಸುತ್ತದೆ.
370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಭಾರತದ ನಿರ್ಧಾರದಿಂದ ಪಾಕಿಸ್ಥಾನವು ಕುಪಿತಗೊಂಡಿದ್ದು, ಇದೇ ಕಾರಣದಿಂದಾಗಿ ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.