ನವದೆಹಲಿ: ಎನ್ಡಿಟಿವಿ ಸ್ಥಾಪಕರಾದ ಪ್ರಾಣೋಯ್ ರಾಯ್ ಮತ್ತು ರಾಧಿಕಾ ರಾಯ್ ಅವರನ್ನು ಆಗಸ್ಟ್ 9ರಂದು ವಿದೇಶಕ್ಕೆ ತೆರಳದಂತೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದ ಮೂಲಗಳು ತಿಳಿಸಿವೆ. ಇವರಿಬ್ಬರನ್ನು ಹಣಕಾಸು ವಂಚನೆ ಪ್ರಕರಣದಲ್ಲಿ ಸಿಬಿಐ ತನಿಖೆಗೊಳಪಡಿಸಿದ್ದು, ಸಿಬಿಐ ಮನವಿಯ ಮೇರೆಗೆ ಇವರು ವಿದೇಶಕ್ಕೆ ತೆರಳುವುದನ್ನು ತಡೆಯಲಾಗಿದೆ.
ಇವರಿಬ್ಬರು ಮತ್ತು ಇವರ ಖಾಸಗಿ ಕಂಪನಿಯು ಬ್ಯಾಂಕುಗಳನ್ನು ವಂಚಿಸಿದೆ ಎಂದು ಸಿಬಿಐಯು ಆರೋಪಿಸಿದೆ, ಹೀಗಾಗಿ ಜಾರಿ ನಿರ್ದೇಶನಾಲಯ (ಇಡಿ) ಹಣಕಾಸು ವಂಚನೆ ಕಾಯ್ದೆಯಡಿ ಇವರಿಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ.
ನ್ಯೂ ದೆಹಲಿ ಟೆಲಿವಿಷನ್ನ ಸ್ಥಾಪಕರು ಕಾನೂನುಬಾಹಿರ ವರ್ಗಾವಣೆ ನಡೆಸಿದ್ದರಿಂದ ಐಸಿಐಸಿಐ ಬ್ಯಾಂಕ್ 48 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಎನ್ಡಿಟಿವಿಯ ಈ ಇಬ್ಬರು ಸಂಸ್ಥಾಪಕರಿಗೆ ಇತ್ತೀಚೆಗೆ ಸೆಕ್ಯೂರಿಟಿ ಮಾರ್ಕೆಟ್ಗಳಲ್ಲಿ ಎರಡು ವರ್ಷಗಳ ಅವಧಿಗೆ ಯಾವುದೇ ವ್ಯವಹಾರ ನಡೆಸದಂತೆ ನಿಷೇಧಿಸಲಾಗಿದೆ
ಇವರಿಬ್ಬರು ವಿದೇಶ ಪ್ರವಾಸಕ್ಕೆ ತಡೆಯೊಡ್ಡಿರುವುದನ್ನು ಎನ್ಡಿಟಿವಿ ಖಂಡಿಸಿದ್ದು, ಮಾಧ್ಯಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಾಶಮಾಡುವ ಹುನ್ನಾರ ಎಂದು ಆರೋಪಿಸಿದೆ.
“ಮೂಲಭೂತ ಹಕ್ಕುಗಳ ಸಂಪೂರ್ಣ ನಾಶವಾಗುತ್ತಿವೆ, ಎನ್ಡಿಟಿವಿ ಸಂಸ್ಥಾಪಕರಾದ ರಾಧಿಕಾ ಮತ್ತು ಪ್ರಾಣೋಯ್ ರಾಯ್ ಅವರನ್ನು ಇಂದು ದೇಶ ಬಿಟ್ಟು ಹೋಗದಂತೆ ತಡೆಯಲಾಗಿದೆ. ಇಬ್ಬರೂ ಪತ್ರಕರ್ತರು ಕೇವಲ ಒಂದು ವಾರದ ನಂತರ 16 ನೇ ತಾರೀಖಿನಂದು ಭಾರತಕ್ಕೆ ಮರಳಲು ಟಿಕೆಟ್ ಹೊಂದಿದ್ದರು. ಆದರೂ ವಿನಾಕಾರಣ ಬಂಧಿಸಲಾಗಿದೆ” ಎಂದಿದೆ.
ಆದರೆ ತನಿಖಾ ಸಂಸ್ಥೆಗಳು ಕಾನೂನು ಪ್ರಕಾರವೇ ಇವರಿಬ್ಬರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.