ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿ ಮತ್ತು ಕಲಂ 35ಎ ಅನ್ನು ತೆಗೆದು ಹಾಕಿದ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ(ಪಿಓಕೆ) ಹೋರಾಟಗಾರ ಸೆಂಗೆ ಎಷ್ ಸೆರಿಂಗ್ ಸ್ವಾಗತಿಸಿದ್ದಾರೆ. ಅಲ್ಲದೇ, ಗಿಲ್ಗಿಟ್-ಬಲ್ತಿಸ್ಥಾನಗಳಿಗೂ ಸಂಸತ್ತಿನಲ್ಲಿ ಪ್ರತಿನಿಧಿತ್ವ ನೀಡುವಂತೆ ಅವರು ಭಾರತವನ್ನು ಒತ್ತಾಯಿಸಿದ್ದಾರೆ.
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗಿಲ್ಗಿಟ್ ಬಲ್ತಿಸ್ಥಾನ್ ಪ್ರದೇಶಕ್ಕೆ ಪ್ರತಿನಿಧಿತ್ವ ನೀಡುವುದರಿಂದ ಪಿಓಕೆ ಮೇಲಿನ ಭಾರತ ಪ್ರತಿಪಾದಿಸುತ್ತಿರುವ ಹಕ್ಕಿಗೆ ಬಲ ಬರುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
370ನೇ ವಿಧಿಯನ್ನು ತೆಗೆದು ಹಾಕಿ, ಲಡಾಖ್ ಅನ್ನು ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶ ಮಾಡಿರುವುದಕ್ಕೆ ಅವರು ಭಾರತದ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಇದಲ್ಲದೆ, ‘ನವ ಪಾಕಿಸ್ಥಾನ’ವನ್ನು ನಿರ್ಮಿಸಲು ಮುಂದಾಗಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರನ್ನುನೋಡಿ ಕಲಿಯಬೇಕು ಎಂದು ಸೆರಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಯುಟಿ) ವಿಭಜಿಸುವ ಮತ್ತು ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಕುರಿತು ಸಂಸತ್ತಿನ ಚರ್ಚೆಯ ಸಮಯದಲ್ಲಿ, ಶಾ ಅವರು “ಕಾಶ್ಮೀರಕ್ಕಾಗಿ ನಮ್ಮ ಜೀವವನ್ನು ನೀಡಲೂ ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದರು.
I extend heartiest congratulations to the Prime Minister of India Shri Narendra @narendramodi ji and the Home Minister Shri @AmitShah Ji for granting #unionterritory status to our beloved #Ladakh.
May the people of Ladakh prosper
May India prosper
Jai Hind— #SengeSering ས།ཚ། (@SengeHSering) August 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.