ನವದೆಹಲಿ: ಲಡಾಖ್ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದ ಕಾಂಗ್ರೆಸ್ ಅಲ್ಲಿನ ಜನರನ್ನು “ಶಿಕ್ಷಣ ನಿರಾಶ್ರಿತ”ರನ್ನಾಗಿ ಮಾಡಿತು ಎಂದು ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೇರಿಂಗ್ ನಂಗ್ಯಾಲ್ ಬುಧವಾರ ಆರೋಪಿಸಿದ್ದಾರೆ.
“ನಾವು ಶಿಕ್ಷಣ ನಿರಾಶ್ರಿತರು. ಅಂದರೆ ಶಿಕ್ಷಣಕ್ಕಾಗಿ ಬೇರೆ ಪ್ರದೇಶವನ್ನು ಅರಸಿಕೊಂಡು ಹೋಗಬೇಕಾದ ಅನಿವಾರ್ಯತೆಯಲ್ಲಿ ಇರುವವರು. ಇದು ನಮಗೆ ಒಳ್ಳೆಯದನ್ನು ಮಾಡಿಲ್ಲ” ಎಂದು ನಂಗ್ಯಾಲ್ ಹೇಳಿದ್ದಾರೆ.
ಭಾರತದ ಹೊಸ ಕೇಂದ್ರಾಡಳಿತ ಪ್ರದೇಶದ ಲಡಾಖ್ನ ಬಿಜೆಪಿಯ ಯುವ ಸಂಸದನಾಗಿರುವ ನಂಗ್ಯಾಲ್ ಅವರು ಸಂಸತ್ತಿನಲ್ಲಿ ಮಾತನಾಡಿದ ರೀತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲರೂ ಶ್ಲಾಘನೆಗಳ ಸುರಿಮಳೆಯನ್ನು ಅರ್ಪಿಸಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಗ್ಗೆ ಇವರು ಸಂಸತ್ತಿನಲ್ಲಿ ಮಾಡಿದ ಭಾಷಣದ ತರುವಾಯ ದೇಶವ್ಯಾಪಿಯಾಗಿ ಖ್ಯಾತಿಯನ್ನು ಇವರು ಗಳಿಸಿಕೊಂಡಿದ್ದಾರೆ.
ಲೇಹ್ನಲ್ಲಿನ ಬಿಜೆಪಿ ಕಛೇರಿಯನ್ನು ನೋಡಿಕೊಳ್ಳುತ್ತಿದ್ದ ಇವರು ಇಂದು 17ನೇ ಲೋಕಸಭೆಯ ಸಂಸದನಾಗಿ ಆಯ್ಕೆಯಾಗಿದ್ದಾರೆ.
ಲಡಾಖ್ ಅನ್ನು ವಿಧಾನಸಭೆಯಿಲ್ಲದ ಕೇಂದ್ರಾಡಳಿತ ಪ್ರದೇಶ ಮಾಡಿದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, “ವಿಧಾನಸಭೆ ಬೇಕೆಂದರೆ ನಾವು ಮೋದಿಯವರ ಬಳಿ ಹೋಗುತ್ತೇವೆ. 56 ಇಂಚು ಎದೆಯ ನಾಯಕ ನಮಗೆ ಅದನ್ನೂ ನೀಡಬಲ್ಲರು. ಸದ್ಯಕ್ಕೆ ನಮಗೆ ಸ್ವಾಯತ್ತ ಮಂಡಳಿಯಾದುದರಲ್ಲೇ ಖುಷಿ ಇದೆ” ಎಂದಿದ್ದಾರೆ.
“ಕಾಂಗ್ರೆಸ್ ಈಗ ನಾಯಕನಿಲ್ಲದ ಪಕ್ಷವಾಗಿದೆ. ಯಾರು ಏನೂ ಬೇಕಾದರು ಮಾತನಾಡುತ್ತಿದ್ದಾರೆ, ತಮಗೆ ಮನಸ್ಸಿಗೆ ಬಂದದನ್ನು ಮಾಡುತ್ತಿದ್ದಾರೆ. ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ವ್ಯಕ್ತಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದನ್ನು ಶ್ಲಾಘಿಸಿ ಪ್ರತಿಕಾ ಪ್ರಕಟನೆ ಹೊರಡಿಸಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.