ನವದೆಹಲಿ: ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಭಾರತ ಸರ್ಕಾರದ ಕ್ರಮ ನೆರೆಯ ಕೆಂಪು ರಾಷ್ಟ್ರ ಚೀನಾವನ್ನು ಇನ್ನಷ್ಟು ಕೆಂಪಾಗುವಂತೆ ಮಾಡಿದೆ. ಭಾರತದ ಮಾನಸ ಸರೋವರ ಯಾತ್ರಿಕರಿಗೆ ವೀಸಾವನ್ನು ನೀಡದಿರುವ ಮೂಲಕ ಅದು ತನ್ನ ಆಕ್ರೋಶವನ್ನು ಹೊರಹಾಕಿದೆ.
ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷಾಧಿಕಾರವನ್ನು ರದ್ದುಪಡಿಸಿದ ನಿರ್ಧಾರವನ್ನೂ ಚೀನಾ ವಿರೋಧಿಸಿದ್ದು, ಕಾಶ್ಮೀರದ ಸಮಸ್ಯೆಯ ಬಗ್ಗೆ ಗಂಭೀರ ನಿಲುವನ್ನು ತಾಳಬೇಕೆಂದು ಭಾರತ ಮತ್ತು ಪಾಕಿಸ್ಥಾನಕ್ಕೆ ಕರೆ ನೀಡಿದೆ.
ಜಮ್ಮು ಕಾಶ್ಮೀರದ ಸ್ಥಾನಮಾನ ಬದಲಾವಣೆ ಮತ್ತು ಉಭಯ ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಸುವಂತಹ ನಿರ್ಧಾರಗಳಿಂದ ಭಾರತ ಮತ್ತು ಪಾಕಿಸ್ಥಾನ ದೂರವಿರಬೇಕು ಎಂಬ ಪುಕ್ಕಟೆ ಸಲಹೆಯನ್ನೂ ನೀಡಿದೆ.
ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವುದನ್ನೂ ಅದು ವಿರೋಧಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಅವರು ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, “ಚೀನಾವು ಚೀನಾ-ಭಾರತದ ಗಡಿಯ ಪಶ್ಚಿಮ ಭಾಗದಲ್ಲಿನ ತನ್ನ ಭೂಪ್ರದೇಶವನ್ನು ಭಾರತದ ಆಡಳಿತ ವ್ಯಾಪ್ತಿಯಲ್ಲಿ ಸೇರಿಸುವುದಕ್ಕೆ ಚೀನಾ ಸದಾ ವಿರೋಧ ವ್ಯಕ್ತಪಡಿಸುತ್ತದೆ” ಎಂದಿದ್ದಾರೆ.
“ಈ ನಿಲುವು ದೃಢ ಮತ್ತು ಸ್ಥಿರವಾಗಿದೆ ಮತ್ತು ಎಂದಿಗೂ ಬದಲಾಗಿಲ್ಲ. ಭಾರತದ ಕಡೆಯಿಂದ ನಡೆಯುವ ದೇಶೀಯ ಕಾನೂನುಗಳ ಏಕಪಕ್ಷೀಯ ಪರಿಷ್ಕರಣೆಯು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಹಾಳುಮಾಡುತ್ತಲೇ ಇದೆ, ಇದು ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಭಾರತವು ಚೀನಾದ ನಿಲುವನ್ನು ದೃಢವಾಗಿ ತಿರಸ್ಕರಿಸಿದ್ದು, ಇದನ್ನು ಆಂತರಿಕ ವಿಷಯ ಎನ್ನುವ ಮೂಲಕ ಹಲವು ವರ್ಷಗಳಲ್ಲಿ ಮೊದಲ ಬಾರಿಗೆ ಲಡಾಖ್ನ ಭಾಗಗಳ ಬಗ್ಗೆ ಸಾರ್ವಜನಿಕವಾಗಿ ಧ್ವನಿಯೆತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.