ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ ವಿಧಿಯನ್ನು ಸೋಮವಾರ ರದ್ದುಗೊಳಿಸಿರುವುದಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. “ಕಾಶ್ಮೀರಿ ಆಗಿರುವುದರಿಂದ ಇದು ನನಗೆ ಭಾವನಾತ್ಮಕವಾಗಿ ಶಕ್ತಿಯುತ ಕ್ಷಣವಾಗಿದೆ” ಎಂದು ಬಣ್ಣಿಸಿದ್ದಾರೆ.
64 ವರ್ಷದ ಖೇರ್ ಅವರು ಕೇಂದ್ರದ ನಿರ್ಧಾರವನ್ನು ಸಂಸದಿಂದ ಸ್ವಾಗತಿಸಿದ್ದಾರೆ. ಕಾಶ್ಮೀರಿ ಪಂಡಿತನಾಗಿರುವ ಖೇರ್, ತನ್ನ ಸಮುದಾಯವನ್ನು ಕಾಶ್ಮೀರದಿಂದ ಹೊರದೂಡಲ್ಪಟ್ಟ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಮೋದಿ ಸರ್ಕಾರ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇಂದು ಇತಿಹಾಸದಲ್ಲಿ ಗಮನಾರ್ಹ ದಿನವಾಗಿ ಎಂದಿದ್ದಾರೆ. ಅಲ್ಲದೇ, 370 ನೇ ವಿಧಿಯನ್ನು “ಅತ್ಯಂತ ಹಾನಿಕಾರಕ” ಎಂದು ಬಣ್ಣಿಸಿದ್ದಾರೆ.
ವೀಡಿಯೋವನ್ನು ಹರಿಬಿಟ್ಟಿರುವ ಖೇರ್, “ಇಂದು ಶ್ರೇಷ್ಠ ಭಾರತದ ಇತಿಹಾಸದಲ್ಲಿ ಅವಿಸ್ಮರಣೀಯ ದಿನವಾಗಿದೆ. ಅತ್ಯಂತ ಹಾನಿಕಾರ 370ನೇ ವಿಧಿಯನ್ನು ಮೋದಿ ಸರ್ಕಾರ ಜಮ್ಮು ಕಾಶ್ಮೀರದಿಂದ ತೆಗೆದು ಹಾಕಿದೆ. ಒರ್ವ ಕಾಶ್ಮೀರಿಗನಾಗಿ, ಇತಿಹಾಸದ ಮಹತ್ವದ ಕ್ಷಣವೊಂದಕ್ಕೆ ಸಾಕ್ಷಿಯಾಗುತ್ತಿರುವುದು ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ” ಎಂದಿದ್ದಾರೆ.
ಕಲಂ 370 ಕಳೆದ ಹಲವು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹಾನಿಯುಂಟು ಮಾಡುತ್ತಿದ್ದ ಕ್ಯಾನ್ಸರ್ ಆಗಿದೆ. ಇಂದು ನನಗೆ ಖುಷಿಯಾಗುತ್ತಿದೆ, ನಾವು ಅಂತಿಮವಾಗಿ ಪರಿಹಾರವನ್ನು ಕಂಡುಕೊಂಡಿದ್ದೇವೆ ಮತ್ತು ನಾವು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಶಾಂತಿಯತ್ತ ಸಾಗಬಹುದು “ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯಿಂದ ತೆಗೆದುಕೊಂಡ ಈ ನಿರ್ಧಾರಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ.
“ರಾಷ್ಟ್ರೀಯ ಹಿತಾಸಕ್ತಿಯ ಇಂತಹ ದಿಟ್ಟ ನಡೆಗಾಗಿ ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅತ್ಯುತ್ತಮ ಕೈಗಾರಿಕೋದ್ಯಮಿಗಳು ಕಾಶ್ಮೀರದಲ್ಲಿ ಹೂಡಿಕೆ ಮಾಡಲಿ, ಮಾನವೀಯತೆ, ಶಾಂತಿ ಮತ್ತು ಸಮೃದ್ಧಿಗೆ ನಂಬಲಾಗದ ತಾಣವಾಗಿ ಜಮ್ಮುಕಾಶ್ಮೀರ ಹೊರಹೊಮ್ಮಲಿ” ಎಂದು ಅವರು ಹೇಳಿದ್ದಾರೆ.
“ನಾವೆಲ್ಲರೂ ಸಮಾನ ಭಾರತೀಯರು ಎಂದು ನಾನು ಸಹವರ್ತಿ ಕಾಶ್ಮೀರಿಗಳಿಗೆ ಹೇಳಲು ಬಯಸುತ್ತೇನೆ. ಯಾವುದೇ ವಿಭಜನೆ ಅಥವಾ ದ್ವೇಷ ಅಥವಾ ಹಿಂಸಾಚಾರ ಇರಬಾರದು. ನಾವು ಒಟ್ಟಿಗೆ ಬದುಕಬೇಕು, ಭಾರತದ ಜೊತೆ ಕೈ ಜೋಡಿಸಬೇಕು ಮತ್ತು ನಾವು ಹೆಮ್ಮೆಯ ಭಾರತೀಯರಾಗಬೇಕು. ಜೈ ಹಿಂದ್” ಎಂದಿದ್ದಾರೆ.
#WATCH Anupam Kher in New York: Today marks a remarkable day in the history of our great nation India. The most damaging #Article370 has been abolished by Modi govt from J&K. pic.twitter.com/em2C8Ys6Qi
— ANI (@ANI) August 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.