ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತಿದ್ದ ಸಂವಿಧಾನದ ವಿಧಿ 370 ತೊಲಗಲೇ ಬೇಕಿತ್ತು, ಭಯೋತ್ಪಾದನೆಗೆ ಅದುವೇ ಮೂಲವಾಗಿತ್ತು, ಸಾಮಾನ್ಯ ಪರಿಸ್ಥಿತಿ ನಿರ್ಮಾಣಕ್ಕೆ ಅದು ತೊಡಕಾಗುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಿಧಿ ರದ್ಧತಿ ಮತ್ತು ಜಮ್ಮು ಕಾಶ್ಮೀರವನ್ನು ಎರಡು ಭಾಗವನ್ನಾಗಿಸುವ ನಿರ್ಧಾರ ಮೇಲಿನ ಚರ್ಚೆಯ ಸಂದರ್ಭ ಸದನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
370ನೇ ವಿಧಿ ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಮಾರಕವಾಗಿತ್ತು, ಭಯೋತ್ಪಾದನೆಗೆ ಅದು ಮೂಲವಾಗಿತ್ತು, ಈ ವಿಧಿಯನ್ನು ಇಂದು ಕಿತ್ತು ಹಾಕದಿದ್ದರೆ ನಾವೆಂದೂ ಅಲ್ಲಿಂದ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಾಧ್ಯವಾಗುವುದಿಲ್ಲ ಎಂದು ಶಾ ಹೇಳಿದ್ದಾರೆ.
ಸರ್ಕಾರದ ನಿರ್ಧಾರದಿಂದ ಕಾಶ್ಮೀರ ಹೊತ್ತಿ ಉರಿಯಲಿದೆ ಎಂಬ ಪ್ರತಿಪಕ್ಷಗಳ ಆತಂಕವನ್ನು ದೂರ ಮಾಡಲು ಯತ್ನಿಸಿದ ಅವರು, “ಏನೂ ಆಗುವುದಿಲ್ಲ, ಮತ್ತೊಂದು ಕೊಸೊವೊ ಮಾಡಲು ನಾವು ಬಿಡುವುದಿಲ್ಲ. ಕಾಶ್ಮೀರ ಭೂಲೋಕದ ಸ್ವರ್ಗವಾಗಿದ್ದು, ಸ್ವರ್ಗವಾಗಿಯೇ ಉಳಿಯಲಿದೆ” ಎಂದಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರು ಸಂಘಟನಾ ಮಸೂದೆ 2019 ಅಂಗೀಕಾರಗೊಂಡಿದೆ. ಬಿಜೆಪಿಯ ಸಂಖ್ಯೆ ಕಡಿಮೆ ಇದ್ದರೂ ಅದಕ್ಕೆ ಹಲವಾರು ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಕ್ಕಿದೆ.
“370 ನೇ ವಿಧಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಮೂಲವಾಗಿತ್ತು. ಈ ವಿಧಿ ಹೋಗಲೇಬೇಕಾದ ಸಮಯವಿದೆ, ಇಂದು ಅದು ಹೋಗದಿದ್ದರೆ, ನಾವು ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ತೆಗೆದುಹಾಕಲು ಸಾಧ್ಯವಿಲ್ಲ” ಎಂದು ಅಮಿತ್ ಶಾ ಮೇಲ್ಮನೆಯಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನಕ್ಕಾಗಿ ಹಾಜರಾಗಿದ್ದರು. ಅಮಿತ್ ಶಾ ಅವರ ಭಾಷಣವನ್ನು ಮೋದಿ “ವಿಸ್ತೃತ ಮತ್ತು ಒಳನೋಟವುಳ್ಳದ್ದು” ಎಂದು ಶ್ಲಾಘಿಸಿದರು. “ಹಿಂದಿನ ಐತಿಹಾಸಿಕ ಅನ್ಯಾಯಗಳನ್ನು ನಿಖರವಾಗಿ ಎತ್ತಿ ತೋರಿಸಿದ್ದಾರೆ ಮತ್ತು ಜಮ್ಮುಕಾಶ್ಮೀರದ ಸಹೋದರಿಯರು ಮತ್ತು ಸಹೋದರರಿಗಾಗಿ ತಮ್ಮ ದೃಷ್ಟಿಯನ್ನು ಸುಸಂಬದ್ಧವಾಗಿ ಪ್ರಸ್ತುತಪಡಿಸಿದ್ದಾರೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.