ನವದೆಹಲಿ: ಭಾರತದೊಳಗೆ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ಥಾನ ಬಾರ್ಡರ್ ಆ್ಯಕ್ಷನ್ ಟೀಮ್ (BAT) ಆರ್ಮಿ ರೆಗ್ಯೂಲರ್ಸ್ ಮತ್ತು ಭಯೋತ್ಪಾದಕರ ಶವಗಳನ್ನು ತೆಗೆದುಕೊಳ್ಳದೆ ಪಾಕಿಸ್ಥಾನದ ತನ್ನ ಸೇನೆ ಅವಮಾನ ಮಾಡುತ್ತಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
“ನಿಜಕ್ಕೂ ಇದು ಹತಾಶೆಯ ಸನ್ನಿವೇಶ, ಕಣಿವೆಯ ಶೇ.80ರಿಂದ 90ರಷ್ಟು ಭಯೋತ್ಪಾದಕರು ಅನಾಥವಾಗಿ ನೆಲಕಚ್ಚುತ್ತಿದ್ದಾರೆ” ಎಂದು ರಕ್ಷಣಾ ತಜ್ಞ ಪಿಕೆ ಸಿಹಗಲ್ ಹೇಳಿದ್ದಾರೆ.
“”ಅಲ್ಲದೆ, ಹುರಿಯತ್ನ ಪ್ರಭಾವ, ಹಾಗೆಯೇ ಪಾಕಿಸ್ಥಾನವನ್ನು ಬೆಂಬಲಿಸುವ ರಾಜಕೀಯ ನೇತಾರರ ಪ್ರಯತ್ನ ವ್ಯರ್ಥವಾಗಿದೆ. ಒಳನುಸುಳುಕೋರರ ಹೆಣ ಉರುಳಿಸುವ ಮೂಲಕ ಪಾಕಿಸ್ಥಾನಕ್ಕೆ ಅದರ ವ್ಯವಹಾರವನ್ನು ಅರ್ಥ ಮಾಡಿಕೊಟ್ಟಿದ್ದೇವೆ ಮತ್ತು ಅವರ ಪ್ರತಿಯೊಂದು ಪ್ರಯತ್ನವೂ ವಿಫಲಗೊಳ್ಳುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ. ಭಯ ಮತ್ತು ಭೀತಿ ರಾಷ್ಟ್ರ ವಿರೋಧಿಗಳಾದ ಜನರ ಹೃದಯದಲ್ಲಿ ಸದಾ ಇರುತ್ತದೆ ಮತ್ತು ಅಂತಹ ರಾಷ್ಟ್ರ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಹೆದರುವುದಿಲ್ಲ “ಎಂದು ಅವರು ಪ್ರತಿಪಾದಿಸಿದ್ದಾರೆ.
ನಿವೃತ್ತಿ ಸೈನಿಕ ಕರ್ನಲ್ ವಿಎನ್ ಥಾಪರ್ ಅವರೂ, ಮೃತಪಟ್ಟವರ ಶವಗಳನ್ನು ಪಡೆದುಕೊಳ್ಳದೆ ಪಾಕಿಸ್ಥಾನವು ಅದರ ಶಸ್ತ್ರಾಸ್ತ್ರ ಪಡೆಗಳನ್ನು ಅವಮಾನಿಸುತ್ತಿದೆ ಎಂದಿದ್ದಾರೆ.
“ಪಾಕಿಸ್ಥಾನ ತನ್ನ ಸೈನಿಕರ ಶವಗಳನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ ಎಂಬುದು ಬಹಳ ನಾಚಿಕೆಗೇಡಿನ ಸಂಗತಿ. ಅವರು ಈ ರೀತಿ ವರ್ತಿಸುವ ಮೂಲಕ ತಮ್ಮ ಪಡೆಗಳನ್ನು ಅವಮಾನಿಸುತ್ತಿದ್ದಾರೆ. ಕಾರ್ಗಿಲ್ನಲ್ಲೂ ಇದೇ ಆಗಿತ್ತು, ನಮ್ಮ ಸೈನಿಕರೇ ಪಾಕಿಸ್ಥಾನಿ ಸೈನಿಕರ ಶವಗಳನ್ನು ಹೂಳಬೇಕಾಯಿತು” ಎಂದು ಅವರು ಹೇಳಿದ್ದಾರೆ.
ಮತ್ತೋರ್ವ ರಕ್ಷಣಾ ತಜ್ಞ ಬ್ರಿಗೇಡಿಯರ್ ವಿ.ಮಹಾಲಿಂಗಮ್ ಅವರೂ ಇದೇ ರೀತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು, ಭಯೋತ್ಪಾದಕರನ್ನು ಒಳನುಸುಳಿಸುವ ಸಲುವಾಗಿಯೇ ಪಾಕಿಸ್ಥಾನ ಕದನವಿರಾಮವನ್ನು ಉಲ್ಲಂಘನೆ ಮಾಡುತ್ತಿದೆ ಎಂದಿದ್ದಾರೆ.
“ನಮ್ಮ ಗಡಿಯುದ್ದಕ್ಕೂ ಪಾಕಿಸ್ಥಾನ ತನ್ನ ವಿಶೇಷ ಸೇವಾ ಗುಂಪನ್ನು (ಎಸ್ಎಸ್ಜಿ) ಏಕೆ ಕಳುಹಿಸುತ್ತಿದೆ ಎಂಬುದು ಇನ್ನೂ ಉತ್ತರಸಿಗದ ಪ್ರಶ್ನೆಯಾಗಿದೆ. ಒಳನುಸುಳುಕೋರರಿಗೆ ಅನುಕೂಲವಾಗುವಂತೆ ಪಾಕಿಸ್ಥಾನ ಕದನ ವಿರಾಮ ಉಲ್ಲಂಘನೆ ಮಾಡುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.