ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ. ಈ ವೇಳೆ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ರಿಟೇಲ್, ಆಟೋ, ಎನ್ಬಿಎಸ್ಸಿ ಮತ್ತು ಎಚ್ಎಫ್ಸಿಗಳ ಕ್ರೆಡಿಟ್ ಗ್ರೋತ್ ಬಗ್ಗೆ ಪರಿಶೀಲನೆಗಳನ್ನು ನಡೆಸಲಿದ್ದಾರೆ. ಈ ಮೂಲಕ ಜಿಡಿಪಿ ಪ್ರಗತಿಯನ್ನು ಉತ್ತೇಜಿಸಲು ಪ್ರಮುಖ ಸೂಚಕಗಳನ್ನು ಪಡೆದುಕೊಳ್ಳಲಿದ್ದಾರೆ.
ಎಂಎಸ್ಎಂಇ ವಲಯದ ಯು.ಕೆ. ಸಿನ್ಹಾ ಸಮಿತಿ ವರದಿಯ ಕುರಿತು ಕ್ರಮಗಳು ಮತ್ತು ಸಮಯಸೂಚಿಗಳನ್ನು ಅಂತಿಮಗೊಳಿಸಲು ಹಣಕಾಸು ಸಚಿವರು ಸ್ಟೇಕ್ ಹೋಲ್ಡರ್ ಗಳನ್ನು ಭೇಟಿ ಮಾಡಲಿದ್ದಾರೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.
ಸಮಿತಿಯು ಪ್ರಸ್ತಾಪಿಸಿದ ಅನೇಕ ಕ್ರಮಗಳು ಅಂತರ್ ಸಚಿವಾಲಯದ ಸಮನ್ವಯವನ್ನು ಒಳಗೊಂಡಿದೆ. ಹಣಕಾಸು ಸಚಿವರು ಕಂದಾಯ ಮತ್ತು ಖರ್ಚು ಇಲಾಖೆಗಳು, ಎಂಎಸ್ಎಂಇ ಸಚಿವಾಲಯ ಮತ್ತು ಐಟಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾರ್ಪೊರೇಟ್ ವ್ಯವಹಾರಗಳು ಮತ್ತು ವಾಣಿಜ್ಯ ಮತ್ತು ಟೆಲಿಕಾಂ ಸಚಿವಾಲಯಗಳೊಂದಿಗೆ ಸಭೆ ನಡೆಸಿ ನಿರ್ಧಾರ ಮತ್ತು ಸಮಯಸೂಚಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಂಎಸ್ಎಂಇಗಳ ಅಭಿವೃದ್ಧಿಗೆ ಸಂಬಂಧಿಸಿದ ಶಿಫಾರಸುಗಳನ್ನು ಜೂನ್ನಲ್ಲಿ ಯುಕೆ ಸಿನ್ಹಾ ತಜ್ಞರ ಸಮಿತಿಯು ಸಲ್ಲಿಕೆ ಮಾಡಿದೆ. ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ ಮುಂತಾದುವುಗಳಿಂದ ಹಾನಿಗೊಳಗಾದ ಎಂಎಸ್ಎಂಇಗಳಿಗೆ ಜವಳಿ ನವೀಕರಣ ನಿಧಿ ಯೋಜನೆಯ ಮಾದರಿಯಲ್ಲೇ 5,000 ಕೋಟಿ ರೂ.ಗಳ ನಿಧಿಯನ್ನು ರಚಿಸಬೇಕು ಎಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಇಂದು ನಿರ್ಮಲಾ ಸೀತಾರಾಮನ್ ನಡೆಸಲಿರುವ ಸಭೆಯಲ್ಲಿ ವಿಷಯಗಳು ಚರ್ಚಿತವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.