ಚೆನ್ನೈ: ಇಶಾ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಕಾವೇರಿ ನದಿಯ ರಕ್ಷಣೆ, ಸ್ವಚ್ಛತೆಯ ಜಾಗೃತಿಗಾಗಿ ‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ತಮಿಳುನಾಡಿನ ವೆಲ್ಲಿಯಾಂಗಿರಿಯಲ್ಲಿರುವ ಆದಿಯೋಗಿ ಪ್ರತಿಮೆ ಸಮೀಪ ಚಾಲನೆಯನ್ನು ನೀಡಿದ್ದಾರೆ
ತಮಿಳುನಾಡು ಮತ್ತು ಕರ್ನಾಟಕದ ನದಿ ಜಲಾನಯನ ಪ್ರದೇಶದ 28 ಜಿಲ್ಲೆಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ “ಕಾವೇರಿ ಕಾಲಿಂಗ್” ಅಭಿಯಾನವು, ಕೃಷಿ ಅರಣ್ಯ ಮಾದರಿಯ ಬಗ್ಗೆ ಜಾಗೃತಿ ಮೂಡಿಸುತ್ತದೆ. “ಕಾವೇರಿ ಕಾಲಿಂಗ್ ಆರ್ಥಿಕವಾಗಿ ಲಾಭದಾಯಕ ‘ಕೃಷಿ ಅರಣ್ಯ ಮಾದರಿ’ಯೊಂದಿಗೆ ಕೃಷಿಗೆ ಹೊಸ ವಿಧಾನವನ್ನು ಒದಗಿಸುತ್ತದೆ ಮತ್ತು ಈ ಮಾದರಿಯು ಮಣ್ಣನ್ನು ಸಮೃದ್ಧಗೊಳಿಸುತ್ತದೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ, ಮಾತ್ರವಲ್ಲ ಐದರಿಂದ ಎಂಟು ವರ್ಷಗಳ ಅವಧಿಯಲ್ಲಿ ರೈತರ ಸಂಪತ್ತಿನ ಬೆಳವಣಿಗೆಯನ್ನು ವೃದ್ಧಿಸಲೂ ಸಹಕಾರಿಯಾಗಿದೆ ”ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.
ನದಿಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವ ಈ ಅಭಿಯಾನವನ್ನು ಜುಲೈ 20 ರಂದು ಬೆಂಗಳೂರಿನಲ್ಲಿ ನಡೆದ ಆರ್ಎಫ್ಆರ್ ಮಂಡಳಿಯ ಸಭೆಯ ನಂತರ ಘೋಷಿಸಲಾಯಿತು.
“ಕಾವೇರಿ ಕಾಲಿಂಗ್” ರೈತರಿಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ಪ್ರೇರಣೆ ನೀಡಲಿದೆ ಇದು ನದಿಯ ನೀರಿನ ಹರಿವಿನ ಮಟ್ಟವನ್ನು ಪುನಃಸ್ಥಾಪಿಸುತ್ತದೆ. ಕೃಷಿ ಅರಣ್ಯ ಮಾದರಿಗೆ ಬದಲಾವಣೆಗೊಳ್ಳುವ ರೈತರಿಗೆ ಸರ್ಕಾರ 4 ವರ್ಷಗಳ ಕಾಲ ಸಬ್ಸಿಡಿ ನೀಡಿದರೆ ಬಹಳ ಪ್ರಯೋಜನಕಾರಿಯಾಗುತ್ತದೆ” ಎಂದು ಸದ್ಗುರುಗಳು ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಶಾ ಫೌಂಡೇಶನ್ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳನ್ನು ಸಂಪರ್ಕಿಸಿದೆ ಎಂದಿದ್ದಾರೆ.
ಅಭಿಯಾನದ ಭಾಗವಾಗಿ ಸದ್ಗುರು ಸೆಪ್ಟೆಂಬರ್ನಲ್ಲಿ ತಲಕಾವೇರಿಯಿಂದ ಬೈಕ್ ಸಮಾವೇಶವನ್ನೂ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.