ಗುವಾಹಟಿ: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಸಲುವಾಗಿ ದೇಶದಾದ್ಯಂತ ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ ಅನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಬಿಜೆಪಿ ಹೇಳಿದೆ. ಅಸ್ಸಾಂನಲ್ಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದೇಶದಾದ್ಯಂತದ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಭಾರತ ಅಕ್ರಮ ವಲಸಿಗರ ಧರ್ಮಶಾಲೆಯಲ್ಲ ಎಂದಿದ್ದಾರೆ.
“NRC ಕೇವಲ ಅಸ್ಸಾಂಗಾಗಿ ಅಲ್ಲ, ಅದು ಇಡೀ ದೇಶಕ್ಕಾಗಿ ಇರಬೇಕು ಮತ್ತು ಇಡೀ ದೇಶದಲ್ಲಿ ಅದು ಅನುಷ್ಠಾನಗೊಳ್ಳುವುದು ಅನಿವಾರ್ಯ. ಯಾರೊಬ್ಬರಿಗೂ ನಮ್ಮ ದೇಶ ಧರ್ಮಶಾಲೆಯಾಗಲು ಸಾಧ್ಯವಿಲ್ಲ, ನಮ್ಮ ದೇಶದೊಳಗೆ ಅಕ್ರಮವಾಗಿ ಒಳನುಗ್ಗಿ ಇಲ್ಲಿ ಜೀವನಪೂರ್ತಿ ತಂಗಲು ಯಾರಿಗೂ ಸಾಧ್ಯವಿಲ್ಲ. ಇಂತಹ ಸಮಸ್ಯೆಯನ್ನು ನಾವು ಬದಲಾಯಿಸುತ್ತೇವೆ. ಅಸ್ಸಾಂ ವಿಷಯಕ್ಕೆ ಸಂಬಂಧಿಸಿದಂತೆ, ತಪ್ಪುಗಳಿಲ್ಲದ NRCಯನ್ನು ಮಂಡನೆಗೊಳಿಸುವ ಸಲುವಾಗಿ ಸುಪ್ರೀಂಕೋರ್ಟ್ ಅನ್ನು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಈಶಾನ್ಯ ರಾಜ್ಯಗಳಿಗೆ ಚೌವ್ಹಾಣ್ ಆಗಮಿಸಿದ್ದು, ಎನ್ ಆರ್ ಸಿಯ ಸೂಕ್ಷ್ಮ ಕರಡನ್ನು ಆ.1ರಲ್ಲಿ ವಿಧಾನಸಭೆಯಲ್ಲಿ ಮಂಡನೆಗೊಳಿಸಲು ನಿರ್ಧರಿಸಿದ ಅಸ್ಸಾಂ ಸರ್ಕಾರವನ್ನು ಅವರು ಬೆಂಬಲಿಸಿದ್ದಾರೆ.
“ನಾನು ಪ್ರತ್ಯೇಕವಾಗಿ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ, ಆದರೆ ಸರ್ಕಾರ ಏನೇ ಮಾಡಿದರೂ ಸರಿಯಾಗಿ ಯೋಚಿಸಿಯೇ ಮಾಡಿರುತ್ತದೆ. ಭವಿಷ್ಯದಲ್ಲಿ ಅಸ್ಸಾಂನಲ್ಲಿ ಅಕ್ರಮ ಒಳನುಸುಳುಕೋರರ ಸಮಸ್ಯೆಯನ್ನು ಪರಿಹರಿಸಲು ಬಿಜೆಪಿ ಬದ್ಧವಾಗಿದೆ” ಎಂದಿದ್ದಾರೆ.
ಈಗಾಗಲೇ ಹಲವಾರು ಮಂದಿ ಬಿಜೆಪಿ ನಾಯಕರುಗಳು, ಎನ್ ಆರ್ ಸಿಯನ್ನು ವಿವಿಧ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಬೆಂಗಳೂರಿನಲ್ಲೂ ಅನೇಕ ಅಕ್ರಮ ಬಾಂಗ್ಲಾ ವಲಸಿಗರಿದ್ದು, ಅವರನ್ನು ಹೊರ ಹಾಕುವ ನಿಟ್ಟಿನಲ್ಲಿ ಎನ್ ಆರ್ ಸಿ ಅಗತ್ಯವಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.