ವಡೋದರ: ಗುಜರಾತಿನ ವಡೋದರ ಜಿಲ್ಲಾ ಪಂಚಾಯತ್ ಅಡಿಯಲ್ಲಿನ ಪ್ರೈಮರಿ ಸ್ಕೂಲ್ ಕಮಿಟಿಯು ನಡೆಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಅತೀ ವಿಭಿನ್ನವಾದ ಶೈಲಿಯಲ್ಲಿ ಬರಮಾಡಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜುಲೈ 1 ರಿಂದ ಈ ಶಾಲೆಗಳು ಕಾರ್ಯಾರಂಭ ಮಾಡಿವೆ.
ಈ ಶಾಲೆಗಳು ‘ಬಾಲ ಸತ್ಕಾರ್’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿದ್ದು, ತರಗತಿ ಹೊರಗೆ ಹಾಕಿದ ಸಂಕೇತಗಳಲ್ಲಿ ಯಾವುದನ್ನು ಮಕ್ಕಳು ಆರಿಸುತ್ತಾರೋ ಅದೇ ಮಾದರಿಯ ಸ್ವಾಗತವನ್ನು ಮಕ್ಕಳಿಗೆ ನೀಡಲಾಗಿದೆ.
“ನಾವು ವಿದೇಶದ ವಾಟ್ಸಾಪ್ ವೀಡಿಯೋವೊಂದನ್ನು ನೋಡಿದ್ದೆವು, ಅಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತರಗತಿಗೆ ಸ್ವಾಗತಿಸಲು ಅನನ್ಯ ಮಾರ್ಗವನ್ನು ಅಳವಡಿಸಿಕೊಂಡಿದ್ದರು. ವೀಡಿಯೊದಲ್ಲಿ, ವಿದ್ಯಾರ್ಥಿಗಳು ತರಗತಿಯ ಹೊರಗೆ ಹಾಕಿದ ಸಂಕೇತಗಳತ್ತ ನೋಡಿ ಒಂದನ್ನು ಆಯ್ಕೆ ಮಾಡುತ್ತಿದ್ದರು. ಅವರು ಆಯ್ಕೆ ಮಾಡಿದ ಸಂಕೇತಗಳ ರೀತಿಯಲ್ಲೇ ಅವರನ್ನು ಸ್ವಾಗತ ಮಾಡಲಾಗುತ್ತಿತ್ತು. ಉದಾಹರಣೆಗೆ ನಮಸ್ಕಾರ ಮಾಡುವ ಸಂಕೇತವನ್ನು ಮಾಡಿದರೆ ಮಗುವನ್ನು ನಮಸ್ಕಾರ ಮಾಡಿ ತರಗತಿಗೆ ಬರಮಾಡಿಕೊಳ್ಳಲಾಗುತ್ತದೆ, ಶೇಕ್ ಹ್ಯಾಂಡ್ ಸಂಕೇತ ಆಯ್ಕೆ ಮಾಡಿದರೆ ಶೇಕ್ ಹ್ಯಾಂಡ್ ಮಾಡಿ ಬರಮಾಡಿಕೊಳ್ಳಲಾಗುತ್ತದೆ. ನಾವು ಅದನ್ನೇ ಅನುಸರಿಸಿದ್ದೇವೆ” ಎಂದು ಶಾಲೆಯ ಪ್ರಾಂಶುಪಾಲೆ ಹೀನಾ ಭಟ್ ಹೇಳಿದ್ದಾರೆ.
ಈ ವೀಡಿಯೋದಿಂದ ಪ್ರೇರಣೆ ಪಡೆದು ಶಾಲೆಯ ಕಾರ್ಯಾರಂಭದ ದಿನ ‘ಬಾಲ ಸತ್ಕಾರ್’ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆವು. ಮಕ್ಕಳು ಇದರಿಂದ ಸಂತೋಷಗೊಂಡರು. ಮಕ್ಕಳ ಮತ್ತು ಪೋಷಕರ ನಡುವಣ ಸಂಬಂಧವೂ ಇದರಿಂದಾಗಿ ಆತ್ಮೀಯಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಶಾಲೆಗೆ ಬರಲೂ ಮಕ್ಕಳು ಹೆಚ್ಚು ಉಲ್ಲಸಿತರಾಗುತ್ತಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.