News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಜಂ ಖಾನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಮಹಿಳಾ ಸಂಸದರು

ನವದೆಹಲಿ: ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡುವ ಸಮಾಜವಾದಿ ಮುಖಂಡ ಮತ್ತು ಸಂಸದ ಅಜಂ ಖಾನ್ ವಿರುದ್ಧ ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಸಂಸದರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಖಾನ್ ಅನ್ನು ವಜಾಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

ಒಂದು ವೇಳೆ ಅಜಂ ಖಾನ್ ತನ್ನ ವರ್ತನೆಗೆ ಸಮಂಜಸವಾದ ರೀತಿಯಲ್ಲಿ ಕ್ಷಮಾಪಣೆ ಮಾಡದೆ ಹೋದರೆ ಅವರನ್ನು ಲೋಕಸಭೆಯಿಂದ ಉಚ್ಛಾಟನೆಗೊಳಿಸಬೇಕು  ಎಂದು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ಮಹಿಳಾ ಸಂಸದರು ಆಗ್ರಹಿಸಿದ್ದಾರೆ.

ಅಜಂಖಾನ್ ನಡವಳಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ಸರ್ವ ಪಕ್ಷಗಳ ಸಭೆಯನ್ನು ಕರೆಯುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಪ್ರಶ್ನಾವಳಿಗಳ ಅವಧಿಯಲ್ಲಿ ಮಹಿಳಾ ಸಂಸದರು ಈ ಬಗ್ಗೆ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಸದನದಲ್ಲಿ ಅಜಮ್ ಖಾನ್ ಮತ್ತು ಆತನ ಬಾಸ್ ಅಖಿಲೇಶ್ ಕುಮಾರ್ ಯಾದವ್ ಉಪಸ್ಥಿತರಿರಲಿಲ್ಲ.

ಅಜಂಖಾನ್ ವಿರುದ್ಧ ಮಹಿಳೆಯರ ಹೋರಾಟಕ್ಕೆ ನೇತೃತ್ವ ವಹಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ” ಈ ಸಮಸ್ಯೆಯನ್ನು ಕೇವಲ ಮಹಿಳೆಯರ ಸಮಸ್ಯೆಯಾಗಿ ನೋಡುವುದು ಬೇಡ. ಇದು ಪುರುಷರು ಸೇರಿದಂತೆ ಎಲ್ಲ ಸಂಸದರಿಗೂ ಅವಮಾನ ತರುವಂತಹ ನಡೆ. ಮಹಿಳೆಯನ್ನು ಅವಮಾನಿಸಿ, ನಂತರ ನಾಟಕವಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ.

ಈ ಕೃತ್ಯವನ್ನು ವಿರೋಧಿಸುವಲ್ಲಿ ಸದನದ ಧ್ವನಿ ಒಂದೇ ಆಗಿರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಅಜಂ ಖಾನ್ ವರ್ತನೆಯನ್ನು ಖಂಡಿಸಿದ್ದು, ಒಂದಾ ಕ್ಷಮೆಯಾಚನೆ ಕೇಳಿ, ಇಲ್ಲವೇ ಶಿಕ್ಷೆಯನ್ನು ಅನುಭವಿಸಿ ಎಂದು ಎಚ್ಚರಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಮಿಮಿ ಚಕ್ರವರ್ತಿ ಕೂಡ ಅಜಂ ವರ್ತನೆಯನ್ನು ಖಂಡಿಸಿದ್ದು, ಅವರಿಗೆ ದೊಡ್ಡಮಟ್ಟದ ಶಿಕ್ಷೆಯನ್ನೇ ನೀಡಬೇಕು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ.

ವಿತ್ತ ಸಚಿವ ನಿರ್ಮಲ ಸೀತಾರಾಮನ್ ಅವರು ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಜಂಖಾನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ. “ಮಹಿಳೆಯನ್ನು ಬೆಂಬಲಿಸಿದ ಎಲ್ಲ ಸಂಸದರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಮಹಿಳೆಯರಿಗೆ ಸಂಬಂಧಿಸಿದ ವಿಷಯವನ್ನು ರಾಜಕೀಯಗೊಳಿಸುವುದು ಎಲ್ಲರೂ ಒಂದಾಗಿ ನಿಲ್ಲಬೇಕು. ಅಂತಹ ಸನ್ನಿವೇಶವನ್ನು ಸದನದಲ್ಲಿ ನಾನಿಂದು ನೋಡುತ್ತಿದ್ದೇನೆ. ಹೀಗಾಗಿ ತಡ ಮಾಡದೆ ಕ್ರಮ ಜರುಗಿಸಬೇಕು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top