ಬೆಂಗಳೂರು: ಬೆಂಗಳೂರು ನಾಗರಿಕರ ಕಲೆಕ್ಟಿವ್ ಸಿಎಫ್ಬಿ (ಸಿಟಿಜನ್ಸ್ ಫಾರ್ ಬೆಂಗಳೂರು) ಭಾನುವಾರ, 51 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಕಾರ್ಪೊರೇಟರ್ಗಳನ್ನು ಸನ್ಮಾನಿಸಿದೆ. ನಾಗರಿಕರೊಂದಿಗೆ ನಾಲ್ಕು ಅಥವಾ ಹೆಚ್ಚಿನ ಸಭೆಗಳನ್ನು ನಡೆಸಬೇಕು ಎಂದು ಇರುವ ನಿಯಮವನ್ನು ಪಾಲನೆ ಮಾಡಿದ ವಾರ್ಡ್ ಕಾರ್ಪೊರೇಟರ್ಗಳಿಗೆ ‘ಕಾರ್ಪೊರೇಟರ್ #1 ನಮ್ಮ ಸಮಿತಿ ಪುರಸ್ಕಾರ’ ಪ್ರಶಸ್ತಿಯನ್ನು ಸಿಎಫ್ಬಿ ನೀಡಿ ಗೌರವಿಸಿದೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸೇವಕರಾಗಿದ್ದು, ಸಂವಿಧಾನದಲ್ಲಿರುವ ಮೌಲ್ಯಗಳನ್ನು ಎತ್ತಿಹಿಡಿಯುವ ಕರ್ತವ್ಯಕ್ಕೆ ಬದ್ಧರಾಗಿರಬೇಕಾಗುತ್ತದೆ. ವಾರ್ಡ್ ಕಾರ್ಪೊರೇಟರ್ಗಳು ಮಾಡುವಂತಹ ಉತ್ತಮ ಕಾರ್ಯಗಳನ್ನು ನಾಗರಿಕರು ಗುರುತಿಸುವುದು ಕೂಡ ಮುಖ್ಯವಾಗುತ್ತದೆ”ಎಂದಿದ್ದಾರೆ.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಥಳಿಯಾಡಳಿತಗಳೊಂದಿಗೆ ಭಾಗವಹಿಸಲು ನಾಗರಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದ ಅವರು, ನಾಗರಿಕರನ್ನು ಭೇಟಿಯಾಗುವಲ್ಲಿ ಬದ್ಧತೆಯನ್ನು ಪ್ರದರ್ಶಿಸಿದ ಕಾರ್ಪೊರೇಟರ್ಗಳನ್ನು ಗುರುತಿಸುವಲ್ಲಿ ಯಶಸ್ವಿಯಾದ ಸಿಎಫ್ಬಿಯ ಪ್ರಯತ್ನವನ್ನು ಶ್ಲಾಘಿಸಿದರು.
51 ವಾರ್ಡ್ ಕಾರ್ಪೊರೇಟರ್ಗಳೊಂದಿಗೆ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಕೂಡ ತಮ್ಮ ಜಯನಗರದ ವಾರ್ಡ್ 153 ರಲ್ಲಿ ಮಾಡಿದ ಉತ್ತಮ ಕೆಲಸಕ್ಕಾಗಿ ಪ್ರಶಸ್ತಿಯನ್ನು ಪಡೆದರು. 6 ಸಭೆಗಳಲ್ಲಿ 6 ಸಭೆಗಳನ್ನೂ ನಡೆಸುವಲ್ಲಿ ಯಶಸ್ವಿಯಾದ ಕಾರ್ಪೋರೇಟರ್ ಗಳ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.