ರತ್ಲಂ: ಭಾರತವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ತೀವ್ರ ಸ್ವರೂಪದ ನೀರಿನ ಬಿಕ್ಕಟ್ಟನ್ನು ಎದುರಿಸುವ ಸ್ಥಿತಿಯಲ್ಲಿದೆ, ಇನ್ನು ನೀರಿನ ಗುಣಮಟ್ಟ ವಿಷಯದಲ್ಲಿ 122 ದೇಶಗಳ ಪೈಕಿ ನಮ್ಮ ದೇಶವು 120 ನೇ ಸ್ಥಾನದಲ್ಲಿದೆ.
ನೀತಿ ಆಯೋಗದ ವರದಿಯ ಪ್ರಕಾರ, 2020 ರ ವೇಳೆಗೆ ಭಾರತದ 21 ಪ್ರಮುಖ ನಗರಗಳು ನೀರಿಲ್ಲದೆ ಕೊರಗಲಿವೆ ಮತ್ತು ‘ಡೇ ಝೀರೋ’ ಸ್ಥಿತಿಯನ್ನು ಎದುರಿಸಲಿವೆ. ಅಂದರೆ ಇಡೀ ನಗರದಲ್ಲಿ ದಿನವಿಡಿ ಒಂದೇ ಒಂದು ಹನಿ ನೀರು ಪೂರೈಕೆಯಾಗದ ಸ್ಥಿತಿಗೆ ಬರುತ್ತದೆ.
ಕಳೆದ ಕೆಲವು ವರ್ಷಗಳಿಂದ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಹಳ್ಳಿಯೂ ಕೂಡ ತೀವ್ರ ಸ್ವರೂಪದ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿನ ಜನರು ನೀರಿಗಾಗಿ ಪಡುತ್ತಿರುವ ಕಷ್ಟವನ್ನು ವಿವರಿಸಲೂ ಅಸಾಧ್ಯವಾಗಿದೆ.
ರೈತರ ಕುಟುಂಬಕ್ಕೆ ಸೇರಿದ ಜಿತೇಂದರ್ ಚೌಧರಿ ರತ್ಲಂ ಜಿಲ್ಲೆಯ ಡೆಂಗಮಾಲ್ ಗ್ರಾಮದಲ್ಲಿನ ನೀರಿನ ಅಭಾವ ಕಂಡು ತೀವ್ರ ನೊಂದು ಕೊಂಡಿದ್ದರು. MIT ಉಜ್ಜಯಿನಿಯಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದ ಅವರಿಗೆ, ನೀರನ್ನು ಮರುಬಳಕೆ ಮಾಡಬಹುದು ಆದರೆ ಉತ್ಪಾದಿಸಲಾಗುವುದಿಲ್ಲ ಎಂಬ ಬಗ್ಗೆ ಚೆನ್ನಾಗಿಯೇ ಅರಿವಿತ್ತು. ಹೀಗಾಗಿ ನೀರಿನ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದರು.
ಪ್ರಯತ್ನದ ಫಲವಾಗಿ, ದಿನಕ್ಕೆ 500 ಲೀಟರ್ ಕೊಳಕು ನೀರನ್ನು ಶುದ್ಧೀಕರಿಸುವ, ಕುಡಿಯುವ ಅಥವಾ ಅಡುಗೆ ಮಾಡುವುದನ್ನು ಹೊರತುಪಡಿಸಿ ಮನೆಯ ಇತರ ಎಲ್ಲಾ ಉದ್ದೇಶಗಳಿಗೆ ಬಳಸಬಹುದಾದ ಮತ್ತು ವಿದ್ಯುತ್ತಿನ ಅಗತ್ಯವಿಲ್ಲದ ‘ಶುದ್ಧಮ್’ ಎಂಬ ಕಡಿಮೆ ಬೆಲೆಯ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಜಿತೇಂದರ್ ಕಂಡುಹಿಡಿದರು.
‘ಶುದ್ಧಮ್’ ಅನ್ನು ಕೈಯಲ್ಲೇ ನಿರ್ವಹಿಸಲಾಗುತ್ತದೆ ಮತ್ತು ಆರು ತಿಂಗಳಲ್ಲಿ 90,000 ಲೀಟರ್ ನೀರನ್ನು ಇದರ ಮೂಲಕ ಮರುಬಳಕೆ ಮಾಡಬಹುದು, ಬಳಿಕ ಉತ್ತಮ ಕಾರ್ಯ ದಕ್ಷತೆಗಾಗಿ ಫಿಲ್ಟರಿಂಗ್ ಗ್ರ್ಯಾನ್ಯುಲ್ಸ್ಗಳನ್ನು ಬದಲಾಯಿಸಬೇಕಾಗುತ್ತದೆ. ಈ ವಾಟರ್ ಪ್ಯೂರಿಫೈಯರ್ ಅನ್ನು 7,000 ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ ಮತ್ತು ನಿರ್ವಹಣಾ ವೆಚ್ಚವು ವರ್ಷಕ್ಕೆ 500-700 ರೂಪಾಯಿ ತಗಲುತ್ತದೆ.
ಜಿತೇಂದರ್ ಅವರು ಈ ಶುದ್ಧೀಕರಣ ವ್ಯವಸ್ಥೆಯನ್ನು ವಾಣಿಜ್ಯೀಕರಣಗೊಳಿಸಲು ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದ್ದರು ಮತ್ತು ಇತ್ತೀಚೆಗೆ ಅವರಿಗೆ ಪೇಟೆಂಟ್ ಕೂಡ ಸಿಕ್ಕಿದೆ. ಹೀಗಾಗಿ ತಮ್ಮ ಆವಿಷ್ಕಾರವನ್ನು ಮಾರಾಟ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.
ಪೇಟೆಂಟ್ ಪಡೆದ ನಂತರ, ಜಿತೇಂದರ್ ಹಲವಾರು ದೊಡ್ಡ ಕಂಪನಿಗಳಿಂದ ದೊಡ್ಡ ಮಟ್ಟದ ಆರ್ಡರ್ಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಈ ಶುದ್ಧೀಕರಣ ಘಟಕಗಳನ್ನು ಸಹ ಸ್ಥಾಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.