ಭುವನೇಶ್ವರ: ‘ಫನಿ’ ಚಂಡಮಾರುತದಿಂದ ಸಾಕಷ್ಟು ಹಾನಿಗೊಳಗಾಗಿರುವ ಒರಿಸ್ಸಾದಲ್ಲಿ ಮರು ನಿರ್ಮಾಣ ಕಾರ್ಯ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಚಂಡಮಾರುತ ಪೀಡಿತ 9 ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ಸಹಜ ಸ್ಥಿತಿಗೆ ಮರಳುತ್ತಿವೆ ಮತ್ತು ಅಲ್ಲಿ ವಿದ್ಯುತ್ ಹಾಗೂ ಟೆಲಿಕಾಂ ಸೇವೆಗಳನ್ನು ಪೂರೈಕೆ ಪುನರಾರಂಭಗೊಂಡಿದೆ ಎಂದು ಒರಿಸ್ಸಾ ಸರ್ಕಾರ ಮಾಹಿತಿ ನೀಡಿದೆ.
ಒರಿಸ್ಸಾದ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಅವರ ನೇತೃತ್ವದಲ್ಲಿ ಇಂದು ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಸಭೆಯನ್ನು ನಡೆಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮರುಪರಿಶೀಲನೆಯನ್ನು ನಡೆಸಲಾಗಿದೆ.
BMC Team in Action with NDRF:-
Cutting and clearing of the uprooted branches of the trees under progress at ward no-12 #Bhubaneswar. #OdishaFightsBackFani #RebuildOdisha pic.twitter.com/PNG3R8qTSt— BMC (@bmcbbsr) May 9, 2019
ಬುಡ ಮೇಲಾಗಿರುವ ಮರಗಳನ್ನು ತೆರವುಗೊಳಿಸುವುದು, ಅರ್ಧಂಬರ್ಧ ನೆಲಕ್ಕುರುಳಿದ ಮರಗಳ ಕೊಂಬೆ-ರೆಂಬೆಗಳ ಕತ್ತರಿಸುವಿಕೆ, ಕಸ ವಿಲೇವಾರಿ, ನೀರು ಸರಬರಾಜು ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೆಲಸಗಳು ಕ್ಷಿಪ್ರಗತಿಯಲ್ಲಿ ಸಾಗಿದೆ.
ವಿದ್ಯುತ್ ಮರು ಪ್ರಸರಣಗೊಳಿಸುವ ಸಲುವಾಗಿ 3500 ಮಂದಿ ಶ್ರಮಿಸುತ್ತಿದ್ದಾರೆ. ಲ್ಯಾಂಡ್ ಸೇವೆಗಳನ್ನು ಮರು ಆರಂಭಿಸಲಾಗಿದೆ, ಟೆಲಿಕಾಂ ಸರ್ವಿಸ್ ಪ್ರೊವೈಡರ್ಗಳು ತಮ್ಮ ಮೊಬೈಲ್ ಸರ್ವಿಸ್ ಅನ್ನು ಸುಧಾರಣೆಗೊಳಿಸಿದ್ದಾರೆ.
ಬಿಎಂಸಿ ಕಛೇರಿಯಲ್ಲಿ ಮಲ್ಟಿ ಎಜೆನ್ಸಿ ಕಂಟ್ರೋಲ್ ರೂಂನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ಹೆಚ್ಚುವರಿ 1 ಸಾವಿರ ಕೋಟಿ ರೂಪಾಯಿಗಳ ನೆರವು ಈಗಾಗಲೇ ಕೈಸೇರಿದೆ ಎಂಬುದನ್ನು ಒರಿಸ್ಸಾ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸೇರಿ ಹಾನಿಗೊಳಗಾದ ಪ್ರದೇಶಗಳ ಮರುನಿರ್ಮಾಣದ ಬಗ್ಗೆ ವಿಸ್ತೃತ ಯೋಜನೆಯನ್ನು ಹಾಕಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.