ತಿರುವನಂತಪುರಂ: ಕೇರಳದಲ್ಲಿ ಚುನಾವಣೆ ಅಂತ್ಯಗೊಂಡಿದೆ. ಆದರೆ ಚುನಾವಣಾ ಪ್ರಚಾರ ಕಾರ್ಯದ ಸಂದರ್ಭಗಳಲ್ಲಿ ಬಳಸಲಾಗಿರುವ ಬ್ಯಾನರ್, ಶಾಲ್ ಮುಂತಾದ ವಸ್ತುಗಳನ್ನು ರಿಸೈಕಲ್ ಮಾಡುವ ಪ್ರಕ್ರಿಯೆ ಅಲ್ಲಿ ಭರದಿಂದ ಸಾಗುತ್ತಿದೆ. ಇದರಿಂದ ಚುನಾವಣಾ ಸಂದರ್ಭದಲ್ಲಿ ಉಂಟಾದ ತ್ಯಾಜ್ಯದ ಪ್ರಮಾಣ ಸಾಕಷ್ಟು ಕಡಿಮೆಯಾಗಲಿದೆ. ಮಾತ್ರವಲ್ಲ, ಇದರಿಂದ ಹಲವಾರು ಮಂದಿಗೆ ಉದ್ಯೋಗಾವಕಾಶಗಳೂ ಸಿಕ್ಕಿವೆ.
ಕೋವಲಮ್, ತಿರುವನಂತಪುರಂಗಳಲ್ಲಿ ಎನ್ಜಿಓವೊಂದರ ಮಹಿಳೆಯರ ತಂಡ ನಿತ್ಯ 30 ಕ್ಯಾರಿ ಬ್ಯಾಗ್ಗಳನ್ನು ತಯಾರಿಸುತ್ತಿದೆ. ಈ ಕ್ಯಾರಿ ಬ್ಯಾಗ್ಗಳು ಸ್ವಲ್ಪ ವಿಭಿನ್ನವಾಗಿದ್ದು, ಪಕ್ಷಗಳ ಚಿಹ್ನೆ, ಅಭ್ಯರ್ಥಿಗಳ ಭಾವಚಿತ್ರ ಇತ್ಯಾದಿಗಳನ್ನು ಒಳಗೊಂಡಿದೆ. ಬ್ಯಾಗ್ ತಯಾರಿಸುವ ಮಹಿಳೆಯುರಿಗೆ ಒಂದು ಬ್ಯಾಗ್ಗೆ 12 ರೂಪಾಯಿಗಳನ್ನು ನೀಡಲಾಗುತ್ತದೆ.
ತಿರುವನಂತಪುರಂನ ಬಿಜೆಪಿ ಅಭ್ಯರ್ಥಿ ಕುಮ್ಮಾನಂ ರಾಜಶೇಖರನ್ ಅವರು, ವರ್ಕ್ಶಾಪ್ ಅನ್ನು ಆಯೋಜನೆಗೊಳಿಸಿದ್ದು, ಅಲ್ಲಿ ಸ್ವಯಂಸೇವಕರು ಸಾವಿರಾರು ಪಕ್ಷದ ಶಾಲು, ಬ್ಯಾನರ್ ಇತ್ಯಾದಿಗಳನ್ನು ಉಪಯೋಗಕರ ವಸ್ತುಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಬ್ಯಾಗ್, ಡ್ರೆಸ್ ಇತ್ಯಾದಿಗಳನ್ನು ತಯಾರು ಮಾಡಲಾಗಿದೆ. ಫೆಕ್ಸ್ ಬೋರ್ಡ್ಗಳನ್ನು ಗ್ರೋ ಬ್ಯಾಗ್ ಅನ್ನಾಗಿ ಪರಿವರ್ತನೆ ಮಾಡಿ, ಸ್ಥಳಿಯ ಸಾವಯವ ಕೃಷಿಗೆ ಬಳಸಲಾಗುತ್ತಿದೆ.
ತನಗೆ ಸುಮಾರು 98,000 ಶಾಲ್ಗಳು ಪ್ರಚಾರದ ಸಂದರ್ಭ ದೊರೆತಿದೆ ಎಂದು ರಾಜಶೇಖರ್ ಹೇಳಿದ್ದಾರೆ. ಎಲ್ಲವನ್ನೂ ರಿಸೈಕಲ್ ಮಾಡಲಾಗುತ್ತಿದೆ.
ಇನ್ನೊಂದೆಡೆ ಶಶಿ ತರೂರ್ ಅವರ ಪ್ರಚಾರ ಕಾರ್ಯಕ್ಕೆ ಬಳಸಲಾದ ವಸ್ತುಗಳನ್ನೂ ರಿಸೈಕಲ್ ಮಾಡಲಾಗುತ್ತಿದೆ.
ಕೇರಳದಲ್ಲಿ ಎಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಮೇ 23ರಂದು ದೇಶದಾದ್ಯಂತ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.