ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧದ ಟೀಕೆಯನ್ನು ತೀಕ್ಷ್ಣಗೊಳಿಸಿದ್ದಾರೆ. ನಾನು ನನ್ನ ಸ್ವಂತಕ್ಕೆ ಸೇನಾಪಡೆಗಳನ್ನು ಬಳಸಿಕೊಂಡಿಲ್ಲ ಎಂದಿರುವ ಅವರು, ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಅವರು ಐಎನ್ಎಸ್ ವಿರಾಟ್ ಅನ್ನು ವೈಯಕ್ತಿಕ ಹಾಲಿಡೇ ಕಳೆಯುವುದಕ್ಕಾಗಿ ಬಳಸಿಕೊಂಡಿದ್ದರು ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ ಮೋದಿ, “ರಾಹುಲ್ ಹೇಳುತ್ತಾರೆ ಶಸ್ತ್ರಾಸ್ತ್ರ ಪಡೆಗಳು ಯಾರ ವೈಯಕ್ತಿಕ ಪಡೆಗಳೂ ಅಲ್ಲ ಎಂದು. ಆದರೆ ಗಾಂಧಿ ಐಎನ್ಎಸ್ ವಿರಾಟ್ನ್ನು ತನ್ನ ವೈಯಕ್ತಿ ಟ್ಯಾಕ್ಸಿ ಆಗಿ ಬಳಸಿಕೊಂಡು, 10 ದಿನಗಳ ಕಾಲ ಇದರ ಮೂಲಕ ಹಾಲಿಡೇ ಕಳೆದಿದ್ದರು. ಆನ್ ಡ್ಯೂಟಿಯಲ್ಲಿದ್ದ ವಿರಾಟ್ ಅನ್ನು ತಿರುಗಿಸಿ ಗಾಂಧಿ ಕುಟುಂಬಸ್ಥರನ್ನು ಹೊತ್ತೊಯ್ಯಲು ಇದನ್ನು ಬಳಸಲಾಗಿತ್ತು. ರಾಜೀವ್ ಗಾಂಧಿ ಅವರ ಪತ್ನಿ ಮನೆಯವರೂ ಈ ವೇಳೆ ಹಾಜರಿದ್ದರು. ಭಾರತದ ಯುದ್ಧನೌಕೆಯಲ್ಲಿ ವಿದೇಶಿಯರನ್ನು ಕರೆದೊಯ್ಯಬಹುದೇ? ಇದು ಭಾರತದ ಭದ್ರತೆಯೊಂದಿಗೆ ಚೆಲ್ಲಾಟವಾಡಿದಂತಲ್ಲವೇ?” ಎಂದು ಮೋದಿ ಪ್ರಶ್ನಿಸಿದ್ದಾರೆ.
ಐಎನ್ಎಸ್ ವಿರಾಟ್ ಭಾರತದ ಏರ್ಕ್ರಾಫ್ಟ್ ಕ್ಯಾರಿಯರ್ ಆಗಿದ್ದು, 2007ರ ಮಾರ್ಚ್ನಲ್ಲಿ ಸೇವೆಯನ್ನು ಅಧಿಕೃತವಾಗಿ ನಿಲ್ಲಿಸಿದೆ.
ತಮ್ಮ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ಮೋದಿ, ಭಾರತ ಈಗ ಸುರಕ್ಷಿತ ದೇಶವಾಗಿ ಹೊರಹೊಮ್ಮಿದೆ ಎಂದಿದ್ದಾರೆ.
ನಮ್ಮ ಸರ್ಕಾರದ ಬಲಿಷ್ಠವಾದ ಭಯೋತ್ಪಾದನಾ ವಿರೋಧಿ ನಿಯಮವನ್ನು ಅಳವಡಿಸಿಕೊಂಡಿದೆ ಎಂದ ಅವರು, ವಿಶ್ವಸಂಸ್ಥೆಯು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.