ನವದೆಹಲಿ: ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಕಾರಿನಲ್ಲಿ ಚಲಿಸುತ್ತಿದ್ದವರನ್ನು ಚೇಸ್ ಮಾಡಿ ಅಡ್ಡಗಟ್ಟಿದ ಮಮತಾ ಬ್ಯಾನರ್ಜಿ ಅವರ ವೀಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, “ಶ್ರೀರಾಮ ಭಾರತದ ಸಂಸ್ಕೃತಿಯ ಭಾಗ, ಆತನ ಹೆಸರನ್ನು ಹೇಳುವುದರಿಂದ ಯಾರನ್ನಾದರೂ ತಡೆಯಲು ಸಾಧ್ಯವೇ ?” ಎಂದು ಪ್ರಶ್ನಿಸಿದ್ದಾರೆ.
“ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಯಾರಿಗೂ ಶ್ರೀ ರಾಮನ ಹೆಸರನ್ನು ಹೇಳಲು ಬಿಡುತ್ತಿಲ್ಲ. ಭಾರತದಲ್ಲಿ ಶ್ರೀ ರಾಮನ ಹೆಸರನ್ನು ಹೇಳದೆ ಪಾಕಿಸ್ತಾನದಲ್ಲಿ ಹೇಳಲು ಸಾಧ್ಯವೇ ?” ಎಂದಿದ್ದಾರೆ.
ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸಲು ನಡೆಯುತ್ತಿರುವ ಚುನಾವಣೆ. ಇಲ್ಲಿನ 42 ಲೋಕಸಭಾ ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿದ್ದಾರೆ.
ಶ್ರೀರಾಮ ಭಾರತದ ಸಂಸ್ಕೃತಿಯ ಭಾಗ, ಆತನ ಹೆಸರನ್ನು ಹೇಳುವುದರಿಂದ ಯಾರನ್ನೂ ತಡೆಗಟ್ಟಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ.
“ನರೇಂದ್ರ ಮೋದಿ ಸರಕಾರವು 5 ವರ್ಷದಲ್ಲಿ ಪಶ್ಚಿಮ ಬಂಗಾಳಕ್ಕೆ ರೂ. 4,25,000 ಕೋಟಿಗಳನ್ನು ನೀಡಿದೆ. ಆದರೆ ಈ ಮೊತ್ತ ಅಲ್ಲಿನ ಜನರನ್ನು ತಲುಪಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪಶ್ಚಿಮ ಮಿಡ್ನಾಪುರದಲ್ಲಿ ಮಮತಾ ದೀದಿ ಅವರ ಕಾರು ಚಲಿಸುತ್ತಿದ್ದಂತೆ ಮತ್ತೊಂದು ಕಾರಿನಲ್ಲಿ ಸಾಗುತ್ತಿದ್ದವರು ಜೈ ಶ್ರೀ ರಾಮ್ ಎಂದು ಘೋಷಗಳನ್ನು ಕೂಗಿದ್ದಾರೆ. ಈ ವೇಳೆ ಆ ಕಾರನ್ನು ಮಮತಾ ಅವರು ಚೇಸ್ ಮಾಡಿ ಅಡ್ಡಗಟ್ಟಿದ್ದಾರೆ. ಈ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.