ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿರುವ ಮಾದರಿ ಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕುಡಿಯವ ನೀರಿನ ಬಾವಿ ಶುಕ್ರವಾರ ಕುಸಿತ ಉಂಟಾಗಿದೆ. ಈ ಆವರಣದಲ್ಲಿ ಮಾದರಿ ಹಿ. ಪ್ರಾ. ಶಾಲೆ, ಸರ್ವ ಶಿಕ್ಷಣ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನದ ಅಧೀನದಲ್ಲಿರುವ ವಸತಿ ಶಾಲೆ ಇದೆ. ಇದೇ ಬಾವಿಯ ನೀರನ್ನು ಉಪಯೋಗಿಸುತ್ತಿದ್ದು ಮೂರು ಪಂಪ್ಗಳನ್ನು ಇಳಿಸಲಾಗಿತ್ತು. ಕಳೆದ ಕೆಲದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ಬಾವಿಯ ಒಳ ಆವರಣ ಕುಸಿದಿದೆ.ಸುತ್ತಲೂ ಕಟ್ಟಲಾಗಿದ್ದ ಕಲ್ಲುಗಳು ಬಾವಿಯೊಳಗೆ ಬಿದ್ದಿದೆ. ನೀರನ್ನು ಮೇಲೆತ್ತಲು ಬಾವಿಗೆ ಇಳಿಸಲಾಗಿದ್ದ ಪಂಪ್ಗಳು ಹೂತು ಹೋಗಿದೆ. ಪಂಪ್ಗಳನ್ನು ಮೇಲಕ್ಕೆತ್ತಲು ಸಾಧ್ಯವಾಗುತ್ತಿಲ್ಲ.
ವಸತಿ ಶಾಲೆಗೆ ಇದೇ ಬಾವಿಯ ನೀರನ್ನು ಉಪಯೋಗಿಸುವುದರಿಂದ ಪರ್ಯಾಯ ವ್ಯವಸ್ಥೆ ಇಲ್ಲವಾಗಿದೆ. ಇಲ್ಲಿ ಸುಮಾರು 100 ವಿದ್ಯಾರ್ಥಿಗಳಿದ್ದಾರೆ. ಕುಡಿಯಲು, ಸ್ನಾನಕ್ಕೆ ಹಾಗೂ ಬಟ್ಟೆಗಳನ್ನು ಒಗೆಯಲು ನೀರಿನ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಮಾದರಿ ಶಾಲೆಯಲ್ಲೂ ಸುಮಾರು 300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬಿಸಿಯೂಟ ಇರುವ ಕಾರಣ ಇಲ್ಲಿಯೂ ನೀರಿನ ಅವಶ್ಯಕತೆ ಇದೆ.
ಶಾಸಕರ ಭೇಟಿ : ಶಾಸಕ ಕೆ. ವಸಂತ ಬಂಗೇರ, ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು, ಕಂದಾಯ ನಿರೀಕ್ಷಕ ರವಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಶಾಸಕ ಬಂಗೇರ ಅವರು ಪಟ್ಟಣ ಪಂಚಾಯತ್ನ್ನು ಸಂಪರ್ಕಿಸಿ ಶಾಲೆಗೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸ್ಪಂದಿಸಿದ ಪಟ್ಟಣ ಪಂಚಾಯತ್ : ಬಾವಿ ಕುಸಿತದಿಂದ ಕುಡಿಯವ ನೀರಿಗೆ ತೊಂದರೆಯಾಗದಂತೆ ಪಟ್ಟಣ ಪಂಚಾಯತ್ ಆಡಳಿತ ಪರ್ಯಾಯ ವ್ಯವಸ್ಥೆಯನ್ನು ಮಾಡಿದೆ. ಬೆಳ್ತಂಗಡಿ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶಾಲೆಯ ಪಕ್ಕದಲ್ಲಿರುವ ಡಾ| ಸುಧೀರ್ ಪ್ರಭು ಅವರನ್ನು ಸಂಪರ್ಕಿಸಿ ಮಳೆಗಾಲ ಕಳೆಯುವವರೆಗೆ ಅವರ ಬಾವಿಯಿಂದ ನೀರನ್ನು ನೀಡುವಂತೆ ವಿನಂತಿಸಿದರು. ಮಕ್ಕಳ ಹಿತದೃಷ್ಟಿಯಿಂದ ಬಾವಿಗೆ ಪಂಪ್ನ್ನು ಇಳಿಸುವಂತೆ ಡಾ| ಸುಧೀರ್ ಅವರು ಅನುಮತಿ ನೀಡಿದ್ದಾರೆ. ಶನಿವಾರ ಅಲ್ಲಿಂದ ವಸತಿ ಶಾಲೆ, ಮಾದರಿ ಶಾಲೆಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ನಾರಾಯಣ ರಾವ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.