ಭೋಪಾಲ್: ಗೆದ್ದರೆ 15 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು ಎಂದು ಸುಳ್ಳು ಹೇಳಿದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಯುವಕನೊಬ್ಬ ಸರ್ಜಿಕಲ್ ಸ್ಟ್ರೈಕ್ ಮಾಡಿಬಿಟ್ಟಿದ್ದಾನೆ. ಹೌದು, ವೇದಿಕೆಯಲ್ಲೇ ದಿಗ್ವಿಜಯ್ ಅವರಿಗೆ ಮುಖಭಂಗವಾಗುವಂತೆ ಮಾಡಿದ್ದಾನೆ.
ಸಾರ್ವಜನಿಕ ಸಮಾವೇಶವೊಂದರಲ್ಲಿ ಭಾಷಣ ಮಾಡುತ್ತಿದ್ದ ದಿಗ್ವಿಜಯ್ ಸಿಂಗ್ ಅವರು, ಮೋದಿಯವರು 15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರು, ಅದು ನಿಮಗೆ ಸಿಕ್ಕಿದೆಯೇ ಎಂದು ಜನರಲ್ಲಿ ಪ್ರಶ್ನಿಸಿದರು. ಸಭಿಕರ ನಡುವಿದ್ದ ಯುವಕನೊಬ್ಬ ಕೈಮೇಲೆ ಮಾಡಿದ. ತಕ್ಷಣವೇ ಆತನನ್ನು ವೇದಿಕೆಯ ಮೇಲೆ ಕರೆಸಿ ವಿವರಿಸುವಂತೆ ಹೇಳಿದರು.
ವೇದಿಕೆ ಮೇಲೆ ಬಂದು ನಗುತ್ತಲೇ ಉತ್ತರಿಸಿದ ಯುವಕ, ‘ಮೋದಿಯವರು ಸರ್ಜಿಕಲ್ ಸ್ಟೈಕ್ ಮಾಡಿ ಉಗ್ರವಾದಿಗಳನ್ನು ಹೊಡೆದುರುಳಿಸಿದರು” ಎಂದ. ಮುಂದೆ ಆತ ಮಾತನಾಡುತ್ತಿದ್ದಂತೆ ಆತನನ್ನು ವೇದಿಕೆಯಿಂದ ಹಿಂದಕ್ಕೆ ಕಳುಹಿಸಲಾಯಿತು. ಮೋದಿಯವರು ದೇಶದ ಭದ್ರತೆಯನ್ನು ಸುಭದ್ರವಾಗಿಟ್ಟಿರುವುದರಿಂದ ನನಗೆ 15 ಲಕ್ಷ ರೂಪಾಯಿಗಳ ಅಗತ್ಯವಿಲ್ಲ ಎಂದು ಆತ ಹೇಳಲು ಹೊರಟಿದ್ದ. ಆದರೆ ಆತನ ಮಾತನ್ನು ಮೊಟಕುಗೊಳಿಸಲಾಯಿತು. ಈತ ವರ್ತನೆ ದಿಗ್ವಿಜಯ್ ಅವರಿಗೆ ತೀವ್ರವಾದ ಮುಜುಗರವನ್ನು ತಂದಿದೆ.
ವಾಸ್ತವವಾಗಿ ಮೋದಿಯವರು 15 ಲಕ್ಷ ರೂಪಾಯಿಗಳನ್ನು ಜನರ ಖಾತೆಗೆ ಹಾಕುತ್ತೇನೆ ಎಂದು ಹೇಳಲೇ ಇಲ್ಲ. ಆದರೆ ಕಾಂಗ್ರೆಸ್ಸಿಗರು ಹೇಳಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿಸುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.