ಚೆನ್ನೈ: ವಿದ್ಯುತ್ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ, ಕೈಗಾರಿಕೆ ಮತ್ತು ವಸತಿ ಬಳಕೆಗಳಿಗೆ ಅಡೆತಡೆಯಿಲ್ಲದೆ ವಿದ್ಯುತ್ ಪೂರೈಕೆಯಾಗುವಂತೆ ಮಾಡುವ ಸಲುವಾಗಿ ಭಾರತವು ಶೀಘ್ರದಲ್ಲೇ 12 ಹೆಚ್ಚುವರಿ ನ್ಯೂಕ್ಲಿಯರ್ ಪವರ್ ಸ್ಟೇಶನ್ಗಳನ್ನು ಹೊಂದಲಿದೆ ಎಂದು ಅಟೋಮಿಕ್ ಎನರ್ಜಿ ಕಮಿಷನ್ ಇಂಡಿಯಾದ ಮುಖ್ಯಸ್ಥ ಕೆ.ಎನ್. ವ್ಯಾಸ್ ಹೇಳಿದ್ದಾರೆ.
”ವಿಭಿನ್ನ ಬಳಕೆಗಳ ಮೂಲಕ ಜೀವನವನ್ನು ಸುಧಾರಿಸಲು ಪರಮಾಣು ತಂತ್ರಜ್ಞಾನವು ನೆರವಾಗುತ್ತದೆ ಮತ್ತು ಇದು ಸ್ವಚ್ಛ, ಮಾಲಿನ್ಯ ಮುಕ್ತ ಶಕ್ತಿಯ ಮೂಲವಾಗಿದೆ” ಎಂದು ಅವರು ಹೇಳಿದ್ದಾರೆ.
“ಭಾರತೀಯ ಪರಮಾಣು ಕಾರ್ಯಕ್ರಮಗಳ ಸ್ಥಾಪಕ ಶ್ರೀ ಹೋಮಿ ಜಹಾಂಗೀರ್ ಬಾಬಾ ಅವರು, ಪರಮಾಣು ತಂತ್ರಜ್ಞಾನವು ವಿದ್ಯುತ್ ಕ್ಷೇತ್ರದಲ್ಲಿ ಮಾತ್ರವಲ್ಲ, ಜೀವನದ ಅವಶ್ಯಕತೆಗಾಗಿ ಇತರ ಸಾಮಾಜಿಕ ಬಳಕೆಗಳಿಗೂ ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಊಹಿಸಿದ್ದರು” ಎಂದು ವ್ಯಾಸ್ ಹೇಳಿದ್ದಾರೆ.
”ಶುದ್ಧ ಶಕ್ತಿಯ ವಿಷಯಕ್ಕೆ ಬಂದಾಗ ಖಂಡಿತವಾಗಿಯೂ, ಸುಸ್ಥಿರವಾಗಿರುವ ಪರಮಾಣು ಶಕ್ತಿಗೆ ಪರ್ಯಾಯವಾದುದು ಬೇರಿಲ್ಲ, ಯಾವುದೇ ಅಡೆತಡೆಯಿಲ್ಲದೆ ಶುದ್ಧ ಶಕ್ತಿಯನ್ನು ಹೊಂದಬಹುದು ಎಂದು ನಾವು ನಂಬುತ್ತೇವೆ “ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ವ್ಯಾಸ್ ಹೇಳಿದ್ದಾರೆ.
ನ್ಯೂಕ್ಲಿಯರ್ ತಂತ್ರಜ್ಞಾನವನ್ನು ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಮಾಡಲಾಗುತ್ತಿಲ್ಲ, ಇದು ನಮ್ಮ ವಿಜ್ಞಾನಿಗಳಿಗೆ, ವೈದ್ಯರುಗಳಿಗೂ ಸಹಾಯ ಮಾಡುತ್ತದೆ. ವೈದ್ಯಕೀಯ ಕ್ಷೇತ್ರದ ತಂತ್ರಜ್ಞಾನಿಕ ನಾವೀನ್ಯತೆಗಳನ್ನು ಸುಧಾರಿಸುತ್ತದೆ, ರೇಡಿಯೋಥೆರಪಿಗೆ ಒಳಪಡುವ ರೋಗಿಗಳಿಗೆ ಶೇ. 60 ರಷ್ಟು ರಿಲೀಫ್ ನೀಡುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.