ಅಹ್ಮದಾಬಾದ್: ಗುಜರಾತಿನ ಅಹ್ಮದಾಬಾದ್ ಕ್ಷೇತ್ರದ ರನೀಪ್ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತದಾನವನ್ನು ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೇ ವೇಳೆ ಮತಗಟ್ಟೆಯ ಸಮೀಪ ಉಪಸ್ಥಿತರಿದ್ದರು. ಮತದಾನ ಮಾಡುವುದಕ್ಕೂ ಮುನ್ನ ತಮ್ಮ ತಾಯಿಯ ಬಳಿ ತೆರಳಿದ ಮೋದಿಯವರು ಅವರಿಂದ ಆಶೀರ್ವಾದವನ್ನು ಪಡೆದುಕೊಂಡರು.
ಮತದಾನ ನಡೆದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ”ಭಯೋತ್ಪಾದಕರ ಅಸ್ತ್ರ IED (improvised explosive device), ಪ್ರಜಾಪ್ರಭುತ್ವದ ಅಸ್ತ್ರ ವೋಟರ್ ಐಡಿ. ವೋಟರ್ ಐಡಿಯು IED ಗಿಂತ ಪರಿಣಾಮಕಾರಿಯಾಗಿದೆ. ಹೀಗಾಗಿ ನಾವೆಲ್ಲರೂ ವೋಟರ್ ಐಡಿಯ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮತದಾನ ಮಾಡುವುದು ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದಷ್ಟೇ ಪವಿತ್ರ” ಎಂದರು.
”ಇಂದು ಮೂರನೇ ಹಂತದ ಚುನಾವಣೆ ನಡೆಯುತ್ತಿದೆ, ನನ್ನ ತಾಯ್ನಾಡಿನಲ್ಲಿ ನನ್ನ ಕರ್ತವ್ಯವನ್ನು ಪೂರೈಸಲು ಅವಕಾಶ ಪಡೆದುಕೊಂಡಿದ್ದು ನನ್ನ ಪುಣ್ಯ. ವೋಟರ್ ಐಡಿಯು ಜನರ ನಿಜವಾದ ಶಕ್ತಿಯನ್ನು ತೋರಿಸುತ್ತದೆ. ಮತದಾರರು ಅತ್ಯಂತ ಜಾಣರಾಗಿದ್ದರು, ಯಾವುದು ತಪ್ಪು ಮತ್ತು ಸರಿ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದರು.
ಮತದಾನ ಮಾಡಿದ ಬಳಿಕ ಶಾಯಿ ಹಾಕಿದ ಬೆರಳನ್ನು ತೋರಿಸುತ್ತಾ ಮೋದಿ ಮತಗಟ್ಟೆಯಿಂದ ಹೊರ ನಡೆದರು. ಈ ವೇಳೆ ಅವರನ್ನು ನೋಡಲು ಅಪಾರ ಜನಸ್ತೋಮವೇ ಅಲ್ಲಿ ನೆರೆದಿತ್ತು. ಎಲ್ಲರಿಗೂ ಕೈ ಬೀಸುತ್ತಾ ಆತ್ಮೀಯವಾಗಿ ನಡೆದುಕೊಂಡರು. ಮಾಧ್ಯಮಗಳೊಂದಿಗೂ ಮಾತನಾಡಿದರು. ತೆರೆದ ಜೀಪಿನಲ್ಲಿ ಮಿನಿ ರೋಡ್ ಶೋ ನಡೆಸಿದರು.
ಅಹ್ಮದಾಬಾದ್ ಈಸ್ಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಮಭಾಯ್ ಪಟೇಲ್ ಕಣಕ್ಕಿಳಿದಿದ್ದಾರೆ.
Sharing some more glimpses from Ahmedabad, where I voted. pic.twitter.com/AkBFKfiqHN
— Chowkidar Narendra Modi (@narendramodi) April 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.