ನವದೆಹಲಿ: ಪಾಕಿಸ್ಥಾನದಲ್ಲಿ ಬದಕಲು ಸಾಧ್ಯವಿಲ್ಲದೆ ಭಾರತಕ್ಕೆ ಬಂದಿರುವ ಸಾವಿರಾರು ಹಿಂದೂಗಳು, ಮತ್ತೆ ಪಾಕಿಸ್ಥಾನಕ್ಕೆ ತೆರಳದಿರುವ ದೃಢ ನಿರ್ಧಾರವನ್ನು ಮಾಡಿದ್ದಾರೆ. ಭಾರತದ ನಾಗರಿಕತೆಯನ್ನು ಪಡೆಯಲು ಪ್ರಯತ್ನಿಸುತ್ತಿರುವ ಇವರು, ಇಲ್ಲಿ ಮತದಾನ ಮಾಡುವ ದಿನದ ಬಗ್ಗೆ ಕನಸು ಕಾಣುತ್ತಿದ್ದಾರೆ.
ಸುಮಾರು 2 ಸಾವಿರ ಪಾಕಿಸ್ಥಾನಿ ಹಿಂದೂಗಳು ದೆಹಲಿಯ ಮೂರು ಶಿಬಿರಗಳಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ. ಮಜ್ಲೀಸ್ ಮಾರ್ಟ್ ಮೆಟ್ರೋ ಸ್ಟೇಶನ್, ಮಂಜು ಕಾ ತಿಲ ಮತ್ತು ರೋಹಿನಿಯ ಸೆಕ್ಟರ್ 11ರಲ್ಲಿ ಇವರುಗಳು ವಾಸಿಸುತ್ತಿದ್ದಾರೆ. 2013ರಲ್ಲಿ ಈ ನಿರಾಶ್ರಿತ ಶಿಬಿರಗಳು ರಚನೆಯಾಗಿವೆ.
ವರದಿಗಳ ಪ್ರಕಾರ, ಹಲವಾರು ಮಂದಿ ಪಾಕಿಸ್ಥಾನಿ ಪ್ರಜೆಗಳು ಭಾರತದ ನಾಗರಿಕತೆಯನ್ನು ಪಡೆಯುವ ಹಂಬಲದಲ್ಲಿದ್ದಾರೆ. ಇದಕ್ಕಾಗಿ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ.
‘ನಮಗೆಲ್ಲರಿಗೂ ಭಾರತದ ನಾಗರಿಕತ್ವ ಬೇಕು, ನಾಗರಿಕತ್ವ ಪಡೆದ ದಿನ ನಾವು ಈ ದೇಶದ ಪ್ರಜೆಗಳಾಗುತ್ತೇವೆ. ನಾಗರಿಕತ್ವ ಪಡೆದ ಕೂಡಲೇ ನಾವು ನಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಕನಸನ್ನು ಹೊಂದಿದ್ದೇವೆ’ ಎಂದು ಪಾಕಿಸ್ಥಾನದಿಂದ ಬಂದಿರುವ ನಿರಾಶ್ರಿತ ಮಾಲೋ ಹೇಳಿದ್ದಾರೆ.
‘ಪಾಕಿಸ್ಥಾನದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ನಮ್ಮ ಮಕ್ಕಳನ್ನು ಹೊರ ಬಿಡಲು ಭಯವಾಗುತ್ತದೆ. ಇದರಿಂದಾಗಿ ಅವರಿಗೆ ಶಿಕ್ಷಣ ಸಿಗುತ್ತಿಲ್ಲ. ಆದರೆ ಭಾರತದಲ್ಲಿ ನಮಗೆ ಸುರಕ್ಷಿತ ಭಾವನೆ ಸಿಕ್ಕಿದೆ. ಭಾರತ ಸರ್ಕಾರದಿಂದ ಮೂಲ ಸೌಕರ್ಯಗಳನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.