ಕೋಲ್ಕತ್ತಾ: ಮುಸ್ಲಿಂ ಪ್ರಾಬಲ್ಯವಿರುವ ರಾಯ್ಗಂಜ್ನಲ್ಲಿ ಹಿಂದೂಗಳಿಗೆ ಮತದಾನ ಮಾಡದಂತೆ ತಡೆಯೊಡ್ಡಿದಂತಹ ಆತಂಕಕಾರಿ ಬೆಳವಣಿಗೆ ನಡೆದ ಬೆನ್ನಲ್ಲೇ, ಅದೇ ಪಶ್ಚಿಮಬಂಗಾಳದಲ್ಲಿ ರಾರಾಜಿಸುತ್ತಿರುವ ಭೂಮಿ ಮಾರಾಟದ ಸೂಚನಾ ಫಲಕವೊಂದು ಎಲ್ಲರಲ್ಲೂ ಭಯ ಮೂಡಿಸಿದೆ. ‘ಹಿಂದೂ ಸಮುದಾಯಕ್ಕೆ ಈ ಭೂಮಿಯನ್ನು ಮಾರಾಟ ಮಾಡಲಾಗುವುದಿಲ್ಲ’ ಎಂದು ಬರೆಯಲಾಗಿದೆ.
ಬರಸತ್ ಪ್ರದೇಶದ ಮುಸ್ಲಿಂ ಸಮುದಾಯಕ್ಕೆ ಸೇರಿದ ಭೂಮಿಯ ಒಡೆಯನೊಬ್ಬ ತಾನು ಭೂಮಿ ಮಾರಾಟ ಮಾಡುತ್ತಿರುವುದಾಗಿ ಫಲಕವನ್ನು ಹಾಕಿದ್ದಾನೆ. ಇದರಲ್ಲಿ ‘ಸಣ್ಣ ಮತ್ತು ದೊಡ್ಡ ಕಟ್ಟಡಗಳಿಗಾಗಿ ಇಲ್ಲಿ ಭೂಮಿ ಲಭ್ಯವಿದೆ, ಆದರೆ ಹಿಂದೂ ಸಮುದಾಯದವರಿಗೆ ಇದನ್ನು ಮಾರಲಾಗುವುದಿಲ್ಲ’ ಎಂದಿದ್ದಾನೆ.
ಟ್ವಿಟರ್ ಬಳಕೆದಾರ ಸಂಜೀಬ್ ಘೋಷ್ ಎನ್ನುವವರು ಈ ಫಲಕದ ಫೋಟೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳಿಗೆ ತಮ್ಮ ನೆಲದಲ್ಲಿ ಭೂಮಿ ಖರೀದಿ ಮಾಡುವ ಹಕ್ಕಿಲ್ಲವೇ ಎಂದು ಪ್ರತಿಪಾದಿಸಿದ್ದಾರೆ. ಈಗಲೇ ಎದ್ದೇಳದಿದ್ದರೆ ಹಿಂದೂಗಳು ತಮ್ಮ ನಾಡಲ್ಲೇ ನಿರಾಶ್ರಿತರಾಗುತ್ತಾರೆ, ಕಾಶ್ಮೀರಿ ಪಂಡಿತರಿಗಾದ ಸ್ಥಿತಿಯೇ ನಮಗೊದಗಬಹುದು ಎಂದಿದ್ದಾರೆ.
ಪಶ್ಚಿಮಬಂಗಾಳ ರಾಜಕೀಯ ದ್ವೇಷಕ್ಕೆ ಹೆಸರಾಗಿದ್ದು, ವೋಟಿನ ಆಸೆಗಾಗಿ ಅಲ್ಲಿನ ಟಿಎಂಸಿ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿಕೊಂಡು, ಹಿಂದೂಗಳ ಮೇಲೆ ದೌರ್ಜನ್ಯವನ್ನೂ ಮಾಡುತ್ತಿದೆ. ‘ಹಿಂದೂಗಳಿಗೆ ಭೂಮಿ ಮಾರಾಟ ಮಾಡುವುದಿಲ್ಲ’ ಎಂದು ಫಲಕಗಳನ್ನು ಹಾಕುವವರೆಗೂ ದೌರ್ಜನ್ಯ ಮುಂದುವರೆದಿರುವುದು ನಿಜಕ್ಕೂ ಆತಂಕಕಾರಿಯಾದ ಬೆಳವಣಿಗೆಯಾಗಿದೆ.
Scary!! This poster seen in Barasat, Bengal…
Where my Bengal is going under Mamata’s Govt? Even Hindus can’t buy land in their own land today. Wake up…else one day Hindus will be refugees in their own land.
The situation will be like those of Kashmiri Pandits…😡 pic.twitter.com/ekus5Z1g2j
— Sanjib Ghosh 🇮🇳 সঞ্জীব (@sampadscales) April 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.