ನವದೆಹಲಿ: ಖ್ಯಾತ ಭಾರತೀಯ ವಿಮಾನ ಸಂಸ್ಥೆ ಬುದ್ಧಿಜೀವಿಗಳ ಒತ್ತಡಕ್ಕೆ ಮಣಿದು ಎಡವಟ್ಟಿನ ಕೆಲಸವೊಂದನ್ನು ಮಾಡಿದೆ. ಶುಕ್ರವಾರ ತಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಿವೃತ್ತ ಮೇಜರ್ ಜನರಲ್ ಜಿ.ಡಿ ಬಕ್ಷಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಅದನ್ನು ಟ್ವಿಟ್ ಮಾಡಿತ್ತು, ಆದರೆ ಕೆಲ ಬುದ್ಧಿಜೀವಿ ಮತ್ತು ಪತ್ರಕರ್ತರ ವಿರೋಧ ವ್ಯಕ್ತವಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿ ಹಾಕಿದೆ.
ಇಬ್ಬರು ಗಗನಸಖಿಯರೊಂದಿಗೆ, ಮೇಜರ್ ಜನರಲ್ ಬಕ್ಷಿ ಟವರ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, ‘ಜನರಲ್ ಅವರ ಪ್ರಯಾಣದಿಂದ ಕೃತಾರ್ಥರಾಗಿದ್ದೇವೆ, ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಗೆ ಧನ್ಯವಾದಗಳು’ ಎಂದು ಕ್ಯಾಪ್ಶನ್ನಲ್ಲಿ ಬರೆದುಕೊಂಡಿತ್ತು.
ಜನರಲ್ ಬಕ್ಷಿ ಅವರು, ಅತ್ಯಂತ ಗೌರವಾನ್ವಿತ ಸೇನಾಧಿಕಾರಿಯಾಗಿದ್ದು, ವಿಶಿಷ್ಟ್ ಸೇವಾ ಮೆಡಲ್ನಿಂದ ಅವರು ಪುರಸ್ಕರಿಸಲ್ಪಟ್ಟಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಅವರು ಸಲ್ಲಿಸಿದ ಸೇವೆ ಅಪಾರವಾದುದಾಗಿದೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೂ ಅವರು ಪದಕ ಜಯಿಸಿದ್ದಾರೆ.
ಆದರೆ ರೋಹಿತ್ ಸಿಂಗ್ ಮತ್ತು ರಿಫಾತ್ ಜೇವೈದ್ ಅವರಂತಹ ವಿವಾದಾತ್ಮಕ ಪತ್ರಕರ್ತರು, ಬುದ್ಧಿಜೀವಿಗಳು ವಿಸ್ತಾರದ ಟ್ವಿಟ್ಗೆ ವಿರೋಧ ವ್ಯಕ್ತಪಡಿಸಿ, ನಾವಿನ್ನೂ ಅದರಲ್ಲಿ ಪ್ರಯಾಣಿಸುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಿದ್ದರು.
ಆದರೆ ಈ ಟ್ವೀಟ್ಗೆ ಜನಸಾಮಾನ್ಯರಿಂದ ಗಣನೀಯ ಶ್ಲಾಘನೆಯೂ ವ್ಯಕ್ತವಾಗಿತ್ತು, ಆದರೆ ವಿಸ್ತಾರ ಏಕಾಏಕಿ ಆ ಟ್ವಿಟ್ ಅನ್ನು ತೆಗೆದು ಹಾಕಿದೆ. ಈ ವರ್ತನೆಗೆ ಹಲವರಿಂದ ವಿರೋಧಗಳೂ ವ್ಯಕ್ತವಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.