ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಸನ್ನದ್ಧರಾಗಿದ್ದಾರೆ. ಎಪ್ರಿಲ್ 26ರಂದು ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಆ ದಿನ ಅಲ್ಲಿ ಅವರು ಮೆಗಾ ರೋಡ್ ಶೋ ಅನ್ನು ಆಯೋಜನೆಗೊಳಿಸಲಿದ್ದಾರೆ.
2014ರಲ್ಲಿ ಪ್ರಧಾನಿ ಮೋದಿಯವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಪಕ್ಷದ ಅಜಯ್ ರಾಯ್ ಅವರನ್ನು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿದ್ದರು. ಈ ವರ್ಷವೂ ಅವರು, ಗೆಲ್ಲುವ ಹಾದಿಯಲ್ಲಿದ್ದಾರೆ.
ಗುರುವಾರ ನಾಮಪತ್ರ ಸಲ್ಲಿಕೆ ಮಾಡುವ ಪ್ರಧಾನಿಯವರಿಗೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ಮುಖಂಡರಾದ ಜೆಪಿ ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನೀಲ್ ಓಝಾ, ಅಶುತೋಶ್ ಟಂಡನ್ ಅವರು ಸಾಥ್ ನೀಡಲಿದ್ದಾರೆ.
ಸಭೆಯ ಬಳಿಕ ರೋಡ್ ಶೋ ಆರಂಭಗೊಳ್ಳಲಿದೆ. ಬನರಾಸ್ ಹಿಂದೂ ವಿಶ್ವವಿದ್ಯಾಲಯದ ಲಂಕಾ ಗೇಟ್ನಲ್ಲಿ ಮದನ್ ಮೋಹನ್ ಮಾಳವಿಯಾ ಪ್ರತಿಮೆಗೆ ಮಾಲಾರ್ಪಣೆಗೊಳಿಸಿದ ಬಳಿಕ ರೋಡ್ ಶೋ ಆರಂಭಗೊಂಡು, ಜಿಲ್ಲಾಧಿಕಾರಿಯ ಕಛೇರಿಯವರೆಗೂ ಸಾಗಲಿದೆ.
ರೋಡ್ ಶೋದುದ್ದಕ್ಕೂ ಅಪಾರ ಜನಸಮೂಹ ಮೋದಿಯವರನ್ನು ಸೇರಲಿದೆ. 150 ಕಡೆಗಳಲ್ಲಿ ಅವರಿಗೆ ಸ್ವಾಗತಕೋರುವ ಕಾರ್ಯ ನಡೆಯಲಿದೆ. ರೋಡ್ ಶೋ ಮದನಪುರ್ ಮತ್ತು ಸೋನರಪುರ್ ಇತ್ಯಾದಿ ಸ್ಥಳಗಳನ್ನು ಹಾದು ಹೋಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.