ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಈ ಬಾರಿ ಭ್ರಷ್ಟಾಚಾರದ ವಿರುದ್ಧ ಅಲ್ಲ, ಬದಲಿಗೆ ಭ್ರಷ್ಟಾಚಾರ ಪದದ ಪರ ಹೋರಾಟ ನಡೆಸಲಿದ್ದಾರೆ.
ಪುಣೆಯ ಜಂಟಿ ಚಾರಿಟಿ ಕಮಿಷನರ್ ಅವರು ಸುಮಾರು 15 ಎನ್ಜಿಓಗಳಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಭ್ರಷ್ಟಾಚಾರ ಅಥವಾ ಭ್ರಷ್ಟಾಚಾರ ವಿರೋಧಿ ಎಂಬ ಪದವನ್ನು ಎನ್ಜಿಓಗಳ ಹೆಸರಿನಲ್ಲಿ ಇಡಬಾರದು ಎಂದು ಸೂಚಿಸಿದ್ದಾರೆ.
ಅಣ್ಣಾ ಹಜಾರೆಯವರ ‘ಭ್ರಷ್ಟಾಚಾರಿ ವಿರೋಧಿ ಜನ್ ಆಂದೋಲನ್ ನ್ಯಾಸ್’ ಎನ್ಜಿಓಗೆ ಕೂಡ ಈ ಬಗ್ಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಈ ನೋಟಿಸ್ ತನಗೆ ತಲುಪಿಲ್ಲ, ಆದರೆ ಇನ್ನು ಕೆಲವೇ ದಿನಗಳಲ್ಲಿ ತಲುಪಲಿದೆ ಎಂಬ ಮಾಹಿತಿ ಸಿಕ್ಕಿದೆ ಎಂದಿರುವ ಅಣ್ಣಾ, ನೋಟಿಸ್ ಕಳುಹಿಸಿರುವ ಜಂಟಿ ಚಾರಿಟಿ ಕಮಿಷನರ್ ವಿರುದ್ಧ ಹರಿಹಾಯ್ದಿದ್ದಾರೆ.
ಯಾವ ಕಾನೂನಿನ ಅನ್ವಯ ಕಮಿಷನರ್ ಅವರು ಎನ್ಜಿಓಗಳ ಹೆಸರಿನಿಂದ ಭ್ರಷ್ಟಾಚಾರ ಅಥವ ಭ್ರಷ್ಟಾಚಾರ ವಿರೋಧಿ ಪದವನ್ನು ಕಿತ್ತು ಹಾಕಬೇಕೆಂದು ಸೂಚಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹೆಸರನ್ನು ಬಳಸಿಕೊಂಡು ಹಲವು ಎನ್ಜಿಓಗಳು ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿವೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ನೋಟಿಸ್ ನೀಡುವುದಾಗಿ ಚಾರಿಟಿ ಕಮಿಷನರ್ ಶಿವಕುಮಾರ್ ಡಿಘೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.