ಗುವಾಹಟಿ: ಸುರಿಯುವ ಜಡಿ ಮಳೆಯ ನಡುವೆಯೂ ನಿಂತು ಸಾರಿಗೆ ದಟ್ಟಣೆಯನ್ನು ನಿಯಂತ್ರಿಸುವ ತನ್ನ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಅಸ್ಸಾಂನ ಸಾರಿಗೆ ಪೊಲೀಸ್ ಮಿಥುನ್ ದಾಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಮಾತ್ರವಲ್ಲ, ಪೊಲೀಸ್ ಇಲಾಖೆಯಿಂದಲೂ ಶಬ್ಬಾಸ್ ಗಿರಿ ಪಡೆಯುತ್ತಿದ್ದಾರೆ.
ಎಡೆ ಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ಸಮವಸ್ತ್ರ ತೊಟ್ಟು, ಕೊಡೆ ಅಥವಾ ರೈನ್ ಕೋಟ್ ಇಲ್ಲದೆಯೇ ಅವರು ಗುವಾಹಟಿಯ ಅತ್ಯಂತ ಸಾರಿಗೆ ದಟ್ಟಣೆ ಹೊಂದಿರುವ ಇಂಟರ್ಸೆಕ್ಷನ್ನಲ್ಲಿ ಸಾರಿಗೆ ನಿಯಂತ್ರಣದಲ್ಲಿ ನಿರತರಾಗಿದ್ದರು. ಈ ಬಗೆಗಿನ 8 ನಿಮಿಷಗಳ ವೀಡಿಯೋವನ್ನು ಅಸ್ಸಾಂ ಪೊಲೀಸ್ ಟ್ವಿಟ್ ಮಾಡಿದೆ. ಇದು ಭಾರೀ ವೈರಲ್ ಆಗಿದೆ. ಅವರ ಕಾರ್ಯಕ್ಕೆ ಪ್ರಶಂಸೆಯ ಮಳೆಯೇ ಸುರಿದಿದೆ.
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅಸ್ಸಾಂ ಪೊಲೀಸ್, ಮಿಥುನ್ ದಾಸ್ ಅವರ ಅಸಾಧಾರಣ ಕರ್ತವ್ಯ ಪ್ರಜ್ಞೆಗಾಗಿ ವಂದಿಸಿದೆ. “ಸಮರ್ಪಣಾ ಮನೋಭಾವ ಗುಡುಗನ್ನೂ ತುಂತುರು ಆಗಿ ಪರಿವರ್ತಿಸಬಲ್ಲದು’ ಎಂದು ಕ್ಯಾಪ್ಷನ್ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇವರ ಕಾರ್ಯಕ್ಕೆ ಅಪಾರ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಕೆಲವರು ಇವರನ್ನು ದೇಶದ ಬಲಿಷ್ಠ ಸೈನಿಕ ಎಂದು ಬಣ್ಣಿಸಿದರೆ, ಇನ್ನು ಕೆಲವರು ನಿಜವಾದ ಚೌಕಿದಾರ ಎಂದು ಪ್ರಶಂಸಿಸಿದ್ದಾರೆ.
Dedication is thy name!
We salute AB Constable Mithun Das (Basistha PS) of @GuwahatiPol , for his exceptional devotion towards duty and showing us how dedication can turn a storm into a sprinkle.
Kudos!
Video Courtesy: Banajeet Deka pic.twitter.com/c6vfHaQBlT
— Assam Police (@assampolice) March 31, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.