ನವದೆಹಲಿ: ನವದೆಹಲಿಯಲ್ಲಿನ ಪಾಕಿಸ್ಥಾನದ ಹೈ ಕಮಿಷನ್ನಲ್ಲಿ ಇಂದು ನಡೆಯಲಿರುವ ‘ಪಾಕಿಸ್ಥಾನ ನ್ಯಾಷನಲ್ ಡೇ’ ಸಮಾರಂಭಕ್ಕೆ ಪ್ರತಿನಿಧಿಗಳನ್ನು ಕಳುಹಿಸದಿರಲು ಭಾರತ ನಿರ್ಧರಿಸಿದೆ. ಪುಲ್ವಾಮ ಭಯೋತ್ಪಾದನಾ ದಾಳಿ ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸಿನ ಮುಖಂಡರುಗಳನ್ನು ಸಮಾರಂಭಕ್ಕೆ ಆಹ್ವಾನಿಸಿರುವುದನ್ನು ವಿರೋಧಿಸಿ ಭಾರತ ಪಾಕ್ ಹೈ ಕಮಿಷನರ್ ತನಗೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದೆ.
ಪ್ರತಿ ವರ್ಷ ಮಾರ್ಚ್ 23ರಂದು ಪಾಕಿಸ್ಥಾನ ನ್ಯಾಷನಲ್ ಡೇ ಅನ್ನು ಆಚರಣೆ ಮಾಡಲಾಗುತ್ತದೆ, ಆದರೆ ಈ ಬಾರಿ ಪಾಕಿಸ್ಥಾನ ಹೈ ಕಮಿಷನ್ ಮಾರ್ಚ್ 22ರಂದೇ ಸಮಾರಂಭ ಏರ್ಪಡಿಸಲು ನಿರ್ಧರಿಸಿದೆ.
ಪ್ರತಿ ವರ್ಷ ಕೇಂದ್ರ ಸರ್ಕಾರದ ಸಚಿವರೊಬ್ಬರು ಭಾರತದ ಪ್ರತಿನಿಧಿಯಾಗಿ ಇದರಲ್ಲಿ ಭಾಗಿಯಾಗುತ್ತಾರೆ. ಆದರೆ ಈ ಬಾರಿಯ ಆಹ್ವಾನವನ್ನು ಭಾರತ ನಿರಾಕರಿಸಿದೆ. ಕಳೆದ ವರ್ಷ ಸಚಿವ ವಿಕೆ ಸಿಂಗ್ ಅವರು ಭಾಗಿಯಾಗಿದ್ದರು.
ಪುಲ್ವಾಮ ದಾಳಿಯ ಬಳಿಕ ಉಭಯ ದೇಶಗಳ ನಡುವಣ ಸಂಬಂಧ ತೀವ್ರ ಸ್ವರೂಪದಲ್ಲಿ ಹಳಸಿದೆ, ಇಸ್ಲಾಮಾಬಾದನಲ್ಲಿನ ಭಾರತೀಯ ಹೈ ಕಮಿಷನ್ ಅಧಿಕಾರಿಗಳಿಗೆ ಅಲ್ಲಿನ ಭದ್ರತಾ ಸಿಬ್ಬಂದಿಗಳು ಹಿಂಸೆ ನೀಡುತ್ತಿದ್ದಾರೆ ಎಂಬ ಬಗ್ಗೆಯೂ ಭಾರತ ಆರೋಪ ಮಾಡುತ್ತಿದೆ.
1940ರ ಮಾರ್ಚ್ 23ರಂದು ಮುಸ್ಲಿಂ ಲೀಗ್, ಪಾಕಿಸ್ಥಾನ ರಚನೆಯ ಬಗ್ಗೆ ಲಾಹೋರ್ ರಿಸಲ್ಯೂಶನ್ ಅನ್ನು ಅಂಗೀಕರಿಸಿತು ಮತ್ತು ತನ್ನ ಮೊದಲ ಸಂವಿಧಾನವನ್ನು ಸ್ವೀಕರಿಸಿತು. ಇದರ ಸ್ಮರಣಾರ್ಥ ಪ್ರತಿ ವರ್ಷ ಮಾರ್ಚ್ 23ರಂದು ಪಾಕಿಸ್ಥಾನವು ‘ನ್ಯಾಷನಲ್ ಡೇ’ ಅನ್ನು ಆಚರಿಸುತ್ತಾ ಬರುತ್ತಿದೆ. ಈ ಬಾರಿ ನ್ಯಾಷನಲ್ ಡೇಗೆ ಪಾಕಿಸ್ಥಾನವು ಮಲೇಷ್ಯಾ ಪ್ರಧಾನಿ ಡಾ.ಮಹತಿರ್ ಮೊಹಮ್ಮದ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.