ಉಜಿರೆ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಸ್ಥಾನದ ಅನ್ನಪೂರ್ಣ ಛತ್ರದ ಸಾಕ್ಷ ಚಿತ್ರಣ ಇಂದು ನ್ಯಾಶನಲ್ ಜಿಯೋಗ್ರಾಫಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ವಾಹಿನಿಯು ಭಾರತದ ಮೆಗಾ ಕಿಚನ್ಸ್ ಎಂಬ ಕಾರ್ಯಕ್ರಮ ಪ್ರಾರಂಭಮಾಡಿದ್ದು ಈ ಕಾರ್ಯಕ್ರಮದಡಿಯಲ್ಲಿ ಪ್ರಸಾರವಾಗುವ ಅನ್ನಪೂರ್ಣ ಛತ್ರದ ಸಮಗ್ರ ಚಿತ್ರಣ ಕಾಣಬಹುದಾಗಿದೆ. ಛತ್ರದ ಬೃಹತ್ ಅಡುಗೆ ಕೋಣೆಯ ವ್ಯವಸ್ಥೆಯು ಹೇಗೆ ಸಾವಿರಾರು ಭಕ್ತರ ಹಸಿವನ್ನು ಪ್ರತಿದಿನ ತಣಿಸುತ್ತದೆ ಎಂಬ ವಿಚಾರವನ್ನು ಕಾರ್ಯಕ್ರಮದಲ್ಲಿ ನೀಡಲಾಗಿದೆ.
ಅಲ್ಲದೆ ಈ ಭೋಜನಾಲಯದ ನಿರ್ವಹಣೆ, ಅಡುಗೆ ತಯಾರಿಯ ವಿಧಾನ, ಯಾವ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗುತ್ತದೆ ಮತ್ತು ಶುಚಿತ್ವದ ವಿಧಾನವನ್ನು ಕಾರ್ಯಕ್ರಮದಲ್ಲಿ ನೋಡಬಹುದಾಗಿದೆ. ಕಾರ್ಯಕ್ರಮದ ನಿರ್ವಹಣೆಯನ್ನು ಖ್ಯಾತ ಪಾಕಶಾಸ್ತ್ರಜ್ಞ, ಪಾಕ ಪುಸ್ತಕಗಳ ಬರಹಗಾರ ವಿಕಾಸ್ ಖನ್ನಾ ಮಾಡಲಿದ್ದಾರೆ.
ದೇಶದ ಮೆಗಾ ಕಿಚನ್ಸ್ ಕಾರ್ಯಕ್ರಮ ಸೋಮವಾರ ಪ್ರಾರಂಭವಾಗಿದ್ದು ಮತ್ತು ಪ್ರತೀ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ದೇಶದ 5 ಅತಿ ದೊಡ್ಡ ಅನ್ನ ಛತ್ರಗಳಾದ ಶಿರಡಿ, ಚೆನ್ನೈನ ದೆಟ್ಸ್ ಕಿಚನ್, ಧರ್ಮಸ್ಥಳ, ಭಾರತೀಯ ರೈಲ್ವೇಸ್ನ ಕೇಟರಿಂಗ್ ಮತ್ತು ನೊಯಿಡಾದ ಟೂರಿಸಂ ಕಾರ್ಪೋರೇಶನ್ ಮತ್ತು ಹುಬ್ಬಳ್ಳಿಯ ಅಕ್ಷಯ ಪಾತ್ರಾ ಫೌಂಡೇಶನ್ನ ಅನ್ನದಾಸೋಹದ ವಿಶೇಷತೆಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.