News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

FSSAI ಲೈಸೆನ್ಸ್ ಪಡೆದೇ ಪ್ರಸಾದ ವಿತರಿಸಲಿವೆ ಕೇರಳ ದೇಗುಲಗಳು

ತಿರುವನಂತಪುರಂ: ದೇಶದ ಆಹಾರ ನಿಯಂತ್ರಕ, ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standard Authority of India (FSSAI))’ ಅನುಮೋದಿಸಿದ ಪ್ರಸಾದಗಳಷ್ಟೇ ಇನ್ನು ಮುಂದೆ ಕೇರಳದ ದೇಗುಲಗಳಲ್ಲಿ ಸಿಗಲಿವೆ.

ಕರ್ನಾಟಕದ ಕೆಲವು ದೇಗುಲಗಳಲ್ಲಿ ಪ್ರಸಾದಗಳಿಗೆ ವಿಷ ಪ್ರಾಶಣ ಮಾಡಿದ ಘಟನೆಗಳು ನಡೆದ ಹಿನ್ನಲೆಯಲ್ಲಿ ಕೇರಳದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಾರ್ಚ್ 1ರಿಂದ ಕೇರಳದ 10 ಪ್ರಸಿದ್ಧ ದೇಗುಲಗಳು, ಹೊಸ ನಿಯಮದಡಿ ಪ್ರಸಾದಗಳನ್ನು ತಯಾರು ಮಾಡಲಿವೆ. ಪ್ರಸಾದದ ಪ್ರತಿ ಪೊಟ್ಟಣದಲ್ಲೂ ಉತ್ಪಾದನಾ ದಿನಾಂಕ, ತಿನ್ನಲು ಯೋಗ್ಯವಾದ ಕೊನೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಎಫ್‌ಎಸ್‌ಎಸ್‌ಎಐನ ಲೈಸೆನ್ಸ್ ನಂಬರ್‌ಗಳನ್ನೂ ನಮೋದಿಸಲಾಗುತ್ತದೆ. ಪ್ರಸಾದ ಉತ್ಪಾದನೆಯ ಜವಾಬ್ದಾರಿ ಹೊತ್ತವರು ಎಫ್‌ಎಸ್‌ಎಸ್‌ಎಐನ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿರುತ್ತದೆ.

ಈಗಾಗಲೇ ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡುಗಳು ಭೋಗ್(Blissful Hygienic Offering to God – BHOG)ನ್ನು 2017ರಿಂದ ಅನುಸರಿಸುತ್ತಿವೆ. ಇದರ ಅನ್ವಯ ಅನ್ನದಾನ, ಪೂಜಾ ಪ್ರಸಾದಗಳನ್ನು ವಿತರಿಸಲು ಆಹಾರ ಸುರಕ್ಷತೆಯ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top