ನವದೆಹಲಿ: ಯುಎಇ ಮತ್ತು ಸೌದಿ ಅರೇಬಿಯಾಗಳು ಭಾರತದ ಕೃಷಿ ವಲಯದ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿವೆ ಎನ್ನಲಾಗಿದೆ.
ಯುಎಇ ಮತ್ತು ಸೌದಿ ಅರೇಬಿಯಾ ತಮ್ಮ ಆಹಾರ ಭದ್ರತೆಯ ಕಾಳಜಿಯನ್ನು ಪೂರೈಸಿಕೊಳ್ಳಲು ಭಾರತವನ್ನು ಮೂಲವಾಗಿ ಉಪಯೋಗಿಸಿಕೊಳ್ಳಲಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಯ ಸಮಿತ್ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಯುಎಇ ಮತ್ತು ಸೌದಿ ಅರೇಬಿಯಾ ತಮ್ಮ ಆಹಾರ ಭದ್ರತೆ ಸವಾಲುಗಳನ್ನು ಎದುರಿಸಲು ಭಾರತವನ್ನು ಮೂಲವಾಗಿ ಉಪಯೋಗಿಸಲಿವೆ. ಇದೇ ಮೊದಲ ಬಾರಿಗೆ, ಭಾರತದ ರಫ್ತು ನಿಯಮಗಳು, ಕೃಷಿಯ ಸಂಭಾವ್ಯತೆಯನ್ನು ತೋಟಗಾರಿಕೆ, ಡೈರಿ, ಮೀನುಗಾರಿಕೆಯೊಂದಿಗೂ ಗುರುತಿಸಿಕೊಂಡಿದೆ’ ಎಂದಿದ್ದಾರೆ.
‘ನಾವು ರಫ್ತಿಗೆ ಸಿದ್ಧರಿದ್ದೇವೆ. ಗಲ್ಫ್ ರಾಷ್ಟ್ರಗಳು ನಮ್ಮ ಪ್ರಮುಖ ಖರೀದಿದಾರರಾಗಲಿದ್ದಾರೆ. ಯುಎಇ ಸಾವಯವ ಮತ್ತು ಆಹಾರ ಸಂಸ್ಕರಣೆಯಲ್ಲಿ ಹೂಡಿಕೆ ಮಾಡಲು ಬಯಸಿದೆ. ರೈತರು ಕನಿಷ್ಠ ಬೆಂಬಲ ಬೆಲೆಯಡಿ ಈಗಾಗಲೇ ಶೇ.150ರಷ್ಟು ಉತ್ಪಾದನಾ ವೆಚ್ಚವನ್ನು ಪಡೆಯುತ್ತಿದ್ದಾರೆ. ರಫ್ತು ಮಾಡಿದರೆ ಇನ್ನಷ್ಟು ಹೆಚ್ಚು ಆದಾಯವನ್ನು ಅವರು ಗಳಿಸುತ್ತಾರೆ’ ಎಂದರು.
ಕೃಷಿ ರಫ್ತಿಗೆ ಹೆಚ್ಚಿನ ಅವಕಾಶಗಳಿದ್ದು, ಎನ್ಡಿಎ ಸರ್ಕಾರದ ರಫ್ತು ನೀತಿಗಳು ರೈತರಿಗೆ ಪ್ರಯೋಜನಕಾರಿಯಾಗಿವೆ ಎಂದು ತಿಳಿಸಿದ್ದಾರೆ.
source: www.opindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.