ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು, 2019ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ತಮ್ಮ ವೈಯಕ್ತಿಕ ನಮೋ ಆ್ಯಪ್ನಲ್ಲಿ, ವಿವಿಧ ಆಯಾಮಗಳನ್ನು ಒಳಗೊಂಡ ‘ಪೀಪಲ್ಸ್ ಪಲ್ಸ್’ ಸಮೀಕ್ಷೆಯನ್ನು ಆರಂಭಿಸಿದ್ದು, ಬಿಜೆಪಿ ನಾಯಕರುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಈ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ತಮ್ಮ ಟ್ವಿಟರ್ ಅಭಿಮಾನಿಗಳಿಗೆ ಸೋಮವಾರ ಕರೆ ನೀಡಿದ್ದಾರೆ.
‘ನಮೋ ಆ್ಯಪ್ನಲ್ಲಿನ ಸಮೀಕ್ಷೆಯ ಮೂಲಕ ನಾನು ನಿಮ್ಮ ನೇರ ಅಭಿಪ್ರಾಯ ಬಯಸಿದ್ದೇನೆ. ಈ ಅಭಿಪ್ರಾಯ ಅಮೂಲ್ಯವಾಗಿದೆ. ಮುಂದಿನ ಮಹತ್ವದ ನಿರ್ಧಾರ ಕೈಗೊಳ್ಳಲು ನಿಮ್ಮ ಈ ಅಭಿಪ್ರಾಯ ನೆರವಾಗಬಲ್ಲದು. ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಇತರರಿಗೂ ಉತ್ತರಿಸಲು ತಿಳಿಸಿ’ ಎಂದು ಪ್ರಧಾನಿ ಮೋದಿ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.
ಜನರಿಂದ ಬರುವ ಅಭಿಪ್ರಾಯಗಳನ್ನು ವಿಶ್ಲೇಷಿಸಿ, ಮುಂದಿನ ಚುನಾವಣೆಯ ಸವಾಲುಗಳು, ಅಭ್ಯರ್ಥಿಯ ಆಯ್ಕೆಗಳನ್ನು ಮಾಡುವ ನಿರೀಕ್ಷೆ ಇದೆ. ಕಡಿಮೆ ರೇಟಿಂಗ್ ಪಡೆಯುವ ಸಂಸದರಿಗೆ ಮತ್ತೊಂದು ಬಾರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಸಮೀಕ್ಷೆಯ ಪ್ರಶ್ನೆಗಳು: ಜನರ ಅಭಿಪ್ರಾಯ/ ಜನರ ನಾಡಿ
(ಈ ಕೆಳಕಂಡ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಸಾದನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ?)
ಕಡಿಮೆ ದರದಲ್ಲಿ ಆರೋಗ್ಯ ಸೇವೆ
ಉದ್ಯೋಗ ರಚನೆ
ಗ್ರಾಮೀಣ ವಿದ್ಯುದೀಕರಣ
ರೈತರ ಏಳಿಗೆ
ಭ್ರಷ್ಟಾಚಾರ ವಿರುದ್ದ ಹೋರಾಟ
ಸ್ವಚ್ಛ ಭಾರತ
ರಸ್ತೆ ನಿರ್ಮಾಣ
ವಾಯು ಮಾರ್ಗದ ಮೂಲಕ ನಗರ ಹಾಗೂ ಪಟ್ಟಣಗಳ ಸಂಪರ್ಕ
ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿ
ದೇಶದ ಭದ್ರತೆ
ಆಂತರಿಕ ಭದ್ರತೆ ಕಾಪಾಡುವುದು
ಆರ್ಥಿಕತೆ
ಸರ್ಕಾರದ ಕೆಲಸಗಳು ವೇಗವಾಗಿ ನೆಡೆಯುತ್ತಿದೆ ಎಂದು ನಿಮಗೆ ಅನಿಸುತಿದೆಯೇ?
ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯನ್ನು ನೀವು ಹೇಗೆ ರೇಟ್ ಮಾಡುತ್ತೀರಿ?
ನಿಮ್ಮ ರಾಜ್ಯ ಸರ್ಕಾರದ ಕಾರ್ಯಕ್ಷಮತೆಯನ್ನು ನೀವು ಹೇಗೆ ರೇಟ್ ಮಾಡುತ್ತೀರಿ?
ನೀವು ಮತ ಚಲಾಯಿಸುವಾಗ ಕೆಳಗಿನ ಯಾವ ಸಮಸ್ಯೆಗಳು ಪ್ರಮುಕವಾಗುವುದು?
ಮತದಾನಕ್ಕೆ ಮುನ್ನ ನೀವು ಸ್ವಚ್ಛತೆ, ಉದ್ಯೋಗ, ಶಿಕ್ಷಣ, ಕಾನೂನು-ಸುವ್ಯವಸ್ಥೆ, ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಕಲ್ಯಾಣ ಇವುಗಳ ಪೈಕಿ ಯಾವನ್ನು ಮುಖ್ಯ ಎಂದು ಪರಿಗಣಿಸುತ್ತೀರಿ?
ನಿಮ್ಮ ಕ್ಷೇತ್ರದ ಮೂವರು ಜನಪ್ರಿಯ ಬಿಜೆಪಿ ನಾಯಕರು ಹೆಸರು ಸೂಚಿಸಿ.
ಭಾರತ ಸರಕಾರದ ಕಾರ್ಯ ಸಂಸ್ಕೃತಿ ಸುಧಾರಿಸಿದೆ ಅನಿಸುತ್ತದೆಯೇ. (ಹೌದು ಅಥವಾ ಇಲ್ಲ)
ಭಾರತದ ಭವಿಷ್ಯತ್ತು ಹಿಂದೆಂದಿಗಿಂತಲೂ ಈಗ ಹೆಚ್ಚು ಉಜ್ವಲ ಎನಿಸುವುದಿಲ್ಲವೇ?
ನಿಮ್ಮ ಕ್ಷೇತ್ರದಲ್ಲಿ ಮಹಾಘಟಬಂಧನದ ಪ್ರಭಾವವೇನಾದರೂ ಇದೆಯೇ?
ಬಿಜೆಪಿ ಕಾರ್ಯಕರ್ತರಾಗಲು ನಿಮಗೆ ಇಷ್ಟ ಇದೆಯೇ’?
ಬಿಜೆಪಿಗೆ ದೇಣಿಗೆ ನೀಡಿದ್ದೀರಾ?
ನೀವು ನಮೋ ಆ್ಯಪ್ ಪ್ರಚಾರ ಮಾಡಿದ್ದೀರಾ?
source: www.firstpost.com
I want your direct feedback on various issues…take part in the survey on the ‘Narendra Modi Mobile App.’ pic.twitter.com/hdshOPnOEY
— Narendra Modi (@narendramodi) January 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.