ಪ್ರಯಾಗ್ರಾಜ್: ಉತ್ತರಪ್ರದೇಶದ ಮಹಾ ಸಂಗಮ ಸ್ಥಳವಾದ ಪ್ರಯಾಗ್ರಾಜ್ನಲ್ಲಿ ಐತಿಹಾಸಿಕ ಮಹಾಕುಂಭ ಮೇಳ ಇಂದಿನಿಂದ ಆರಂಭಗೊಂಡಿದೆ. ಮಕರ ಸಂಕ್ರಮಣದ ಪ್ರಯುಕ್ತ ಸಾವಿರಾರು ಸಂಖ್ಯೆಯ ಭಕ್ತರು ಮೊದಲ ಶಾಹಿ ಸ್ನಾನ ಮಾಡಿದ್ದಾರೆ.
ವಿವಿಧ ಪಂಥಗಳ ಸ್ವಾಮೀಜಿಗಳು, ವಿವಿಧ ಅಖರಾಗಳ ಸದಸ್ಯರು ಬೂದಿ ಬಳಿದುಕೊಂಡು ಮೆರವಣಿಗೆ ನಡೆಸಿ, ಪೂಜಾ ಪದ್ಧತಿಗಳನ್ನು ನೆರವೇರಿಸಿದ್ದು ಅತ್ಯದ್ಭುತವಾಗಿತ್ತು.
ಶಾಹಿ ಸ್ನಾನದ ಅಂಗವಾಗಿ ಗಂಗೆ, ಯುಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸಾಧುಗಳು, ಸನ್ಯಾಸಿಗಳು, ಭಕ್ತರು ನೀರಿನಲ್ಲಿ ಮುಳುಗಿ ಎದ್ದು ದೇವರಿಗೆ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ಬೆಳಗ್ಗೆ 4 ಗಂಟೆಯಿಂದ ಸ್ನಾನ ಮಹೂರ್ತ ಆರಂಭಗೊಂಡಿದ್ದು, ಸಂಜೆ 5 ಗಂಟೆಯವರೆಗೆ ಮುಂದುವರೆಯಲಿದೆ. ಶಾಹಿ ಸ್ನಾನ ಮಾಡಲು ಆರು ಪವಿತ್ರ ದಿನಗಳನ್ನು ಆಯಾ ನಕ್ಷತ್ರಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
13 ಅಖಾರಗಳು ಇಂದು ಶಾಹಿ ಸ್ನಾನಮಾಡಲಿದ್ದು, ಪ್ರತಿ ಅಖಾರಕ್ಕೆ ತಲಾ 45 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಸನ್ಯಾಸಿ ಅಖಾರಗಳು ಮೊದಲ ಸ್ನಾನವನ್ನು ನೆರವೇರಿಸಲಿದ್ದಾರೆ. 13 ಅಖಾರಗಳ ಪೈಕಿ 7 ಶಿವ ಅಖಾರ, 3 ವೈಷ್ಣವ ಅಖಾರ ಮತ್ತು 3 ಉದಸಿನ ಅಖಾರವಾಗಿದೆ.
ಈ ವರ್ಷದ ಕುಂಭಮೇಳದಲ್ಲಿ 12 ಕೊಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.